ತಾವರಗೇರಾ : ಇಲ್ಲಿನ ಸಮೀಪದ ಜುಮಲಾಪುರ ಗ್ರಾ.ಪಂ ವ್ಯಾಪ್ತಿಯ ಇದ್ದಲಾಪುರ ಗ್ರಾಮದ ಬಸವರಾಜ ಬಿಸನಾಳ ಎಂಬುವ, ಹಳ್ಳಿಯ ಯುವ ಪ್ರತಿಭೆ ದೇಶಸೇವೆ ಸಲ್ಲಿಸಲು ಆಯ್ಕೆ ಆಗಿ ಇಂದು ತರಬೇತಿ ಪಡೆಯಲು ಹೋಗುವ ಸಂದರ್ಭದಲ್ಲಿ ಗ್ರಾಮದ ಎಲ್ಲರ ಕಣ್ಣಲ್ಲಿ ಆನಂದ ಭಾಷ್ಪ ಸುರಿಯಿತು.
ನಮ್ಮ ಗ್ರಾಮದಲ್ಲಿ ಬಡತನದಲ್ಲಿ ವಿದ್ಯಾಬ್ಯಾಸ ಮುಗಿಸಿ ದೇಶರಕ್ಷಣೆಗೆ ಹೊರಟಿರುವ ಯುವಕನನ್ನು ಕಂಡು ಸಂಭ್ರಮಪಟ್ಟರು. ಇದೆ ರೀತಿ ಮುಂದೆ ಎಲ್ಲಾ ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ಹೋಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಂಭುಗೌಡ ಪಾಟೀಲ್ ದುರಗೇಶ ನಾಯಕ ತಿಪ್ಪಣ್ಣ ಮಡ್ಡೇರ ಹನಮಂತ ಶಿವುಕುಮಾರ್ ನಾಗರಾಜ ದಂಡಿನ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಸ್ನೇಹಿತ ವೃಂದದವರು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.