ವೀರ ಯೋಧರಿಗೆ ಅದ್ದೂರಿ ಮೆರವಣಿಗೆ

ವೀರ ಯೋಧರಿಗೆ ಅದ್ದೂರಿ ಮೆರವಣಿಗೆ

ಮಾನ್ವಿ : ಕಳೆದ 17 ವರ್ಷಗಳ ಕಾಲ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ ತಾಲೂಕಿನ ಸಾದಾಪೂರು ಗ್ರಾಮದ ವೀರಯೋಧ ರಾಮಣ್ಣ ಹಾಗೂ ಸಿರವಾರ ತಾಲೂಕಿನ ಕಡದಿನ್ನಿ ಗ್ರಾಮದ ವೀರಯೋಧ ಬ್ಯಾಲಪ್ಪ ಕಡದಿನ್ನಿ ಇವರನ್ನು ಸೋಮವಾರ ಪಟ್ಟಣದಲ್ಲಿ ನೂರಾರು ಜನರು ಸೇರಿ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಬೆಳ್ಳಂಬೆಳಿಗ್ಗೆ ನೂರಕ್ಕೂ ಹೆಚ್ಚು ದೇಶಾಭಿಮಾನಿಗಳು ಜಮಾಯಿಸಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ತಾಯಿನಾಡಿಗೆ ಮರಳಿದ ತಾಲೂಕಿನ ಇಬ್ಬರು ಯೋಧರಾದ ರಾಮಣ್ಣ ಸಾದಾಪೂರು ಮತ್ತು ಬ್ಯಾಲಪ್ಪ ಕಡದಿನ್ನಿರವರನ್ನು ಅತ್ಯಂತ ಗೌರವ ಪೂರ್ಣವಾಗಿ ಎಲ್ಲರೂ ಸಾಮೂಹಿಕವಾಗಿ ಜೈ ಜವಾನ್ ಎಂದು ಘೋಷಣೆ ಕೂಗುತ್ತ ಗೌರವ ಸಲ್ಲಿಸಿದರು.

ನಂತರ ಯುವಕರು ಬೈಕ್ ರ‍್ಯಾಲಿ ಮೂಲಕ ಬಸ್ ನಿಲ್ದಾಣ ಮಾರ್ಗವಾಗಿ ಬಸವ ವೃತ್ತದ ಮೂಲಕ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ತೆರಳಿ ವೀರಯೋಧ ಹುತಾತ್ಮ ಮಂಜುನಾಥ ಪುತ್ಥಳಿಗೆ ಇಬ್ಬರು ಯೋಧರು ಪುಷ್ಪ ನಮನದ ಗೌರವ ಸಲ್ಲಿಸಿದರು.

Related