ಸುರಿದ ಭಾರಿ ಮಳೆಗೆ ತುಂಬಿದ್ದ ಕೆರೆ

ಸುರಿದ ಭಾರಿ ಮಳೆಗೆ ತುಂಬಿದ್ದ ಕೆರೆ

ಧಾರವಾಡ : ಜಿಲ್ಲೆಯಲ್ಲಿ ಹುಬ್ಬಳ್ಳಿ ಹಾಗೂ ಕುಂದಗೋಳಕ್ಕೆ ನೀರು ಪೂರೈಸುವ ಕಲಘಟಗಿ ತಾಲ್ಲೂಕಿನ ನೀರಸಾಗರ ಉಕ್ಕಿ ಹರಿಯುತ್ತಿದೆ.

38 ಅಡಿ ಎತ್ತರದ ಕೆರೆ ಬಹಳ ವರ್ಷಗಳ ನಂತರ ಸತತ ಎರಡನೇ ಬಾರಿ ಭರ್ತಿಯಾಗಿದೆ. ಅಳನಾವರ ತಾಲ್ಲೂಕಿನ ಹೂಲಿ ಕೆರೆಯೂ ಭರ್ತಿಯಾಗಿದೆ.

ಕಳೆದ ಬಾರಿ ಸುರಿದ ಭಾರಿ ಮಳೆಗೆ ತುಂಬಿದ್ದ ಕೆರೆ ಒಡೆಯುವ ಭೀತಿ ಸೃಷ್ಟಿಸಿತ್ತು. ಈ ಬಾರಿಯೂ ಕೆರೆ ತುಂಬಿ ಉಕ್ಕಿ ಹರಿಯುತ್ತಿದೆ. ಸತತ ಮಳೆಗೆ ಬಹಳಷ್ಟು ಕೆರೆಗಳು ಕೊಡಿಹರಿಯುತ್ತಿವೆ.

Related