ಕುಸಿದು ಬಿದ್ದ ಡಿಎಸ್ಪಿ: ಆಸ್ಪತ್ರೆಗೆ ದಾಖಲು

ಕುಸಿದು ಬಿದ್ದ ಡಿಎಸ್ಪಿ: ಆಸ್ಪತ್ರೆಗೆ ದಾಖಲು

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಡಿಎಸ್ಪಿ ವೆಂಕಟೇಶ ಹುಗಿಬಂಡಿ ಅವರು ಪಟ್ಟಣದ ಕಚೇರಿಯಲ್ಲಿಯೇ ಹಠಾತ್ತನೆ ಕುಸಿದು ಬಿದ್ದ ಪರಿಣಾಮ ಅವರನ್ನು ಶಹಾಪುರದ ಸ್ಪಂದನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ

ಸದ್ಯ ಇಸಿಜಿ ಇತರೆ ಟೆಸ್ಟ್ ಮಾಡಿಸಲಾಗುತ್ತಿದ್ದು, ಯಾವುದೇ ಸ್ಪಷ್ಟತೆ ಕಂಡು ಬಂದಿಲ್ಲ. ನಿರಂತರ ಕರ್ತವ್ಯದಲ್ಲಿರುವುದರಿಂದ ಸರಿಯಾದ ವೇಳೆಗೆ ಊಟ ಮಾಡದ ಕಾರಣ ಅವರಿಗೆ ತಲೆಸುತ್ತು ಬಂದು ಬಿದ್ದಿರಬಹುದೆಂದು ಊಹಿಸಲಾಗಿದೆ. ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಸದ್ಯ ಯಾವುದೇ ಪ್ರಾಣಪಾಯವಿಲ್ಲ ಎಂದು ಹೇಳಲಾಗುತ್ತಿದೆ. ಕಲ್ಬುರ್ಗಿ ವಿಭಾಗದ ಖ್ಯಾತ ವೈದ್ಯ ಡಾ.ಶಂಕರಗೌಡ ಆಲ್ದಾಳ ಅವರನ್ನು ಸಂಪರ್ಕಿಸಲಾಗಿದೆ. ಸದ್ಯ ಇಸಿಜಿ ನಾರಮಲ್ ಆಗಿದ್ದು ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎನ್ನಲಾಗಿದೆ.

ಕೊರೊನಾ ನಿಯಂತ್ರಣಕ್ಕಾಗಿ ನಿರಂತರ ಕರ್ತವ್ಯ ನಿರತ ಡಿಎಸ್ಪಿ ಹುಗಿಬಂಡಿ ಅವರು ಅಪಾರ ಜನಪರ ಕಾಳಜಿವಹಿಸಿದ್ದು, ಶಹಾಪುರ-ಸುರಪುರ ಭಾಗದಲ್ಲಿ ಉತ್ತಮ ಹೆಸರು ಮಾಡಿದ್ದಾರೆ.

Related