ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು

  • In Crime
  • July 14, 2022
  • 281 Views
ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು

ಉಡುಪಿ ಜು14:ಮನೆಯ ಪಕ್ಕ ಆಟವಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದಾನೆ. ಈ ದುರ್ಘಟನೆ ಬ್ರಹ್ಮಾವರದ ಉಪ್ಪೂರು ತೆಂಕಬೆಟ್ಟುನಲ್ಲಿ ನಡೆದಿದೆ.

ಮೃತ ದುರ್ದೈವಿ ಬಾಲಕನನ್ನು ಲಾರೆನ್ ಲೂವಿಸ್ (5) ಎಂದು ಗುರುತಿಸಲಾಗಿದೆ. ಈತ ಉಪ್ಪೂರಿನ ನಾರ್ಮನ್ ಮತ್ತು ಸಿಲ್ವಿಯಾ ದಂಪತಿಯ ಪುತ್ರ.

ಕುವೈಟ್ ನಲ್ಲಿ ವಾಸವಾಗಿದ್ದ ಲಾರೆನ್ ಕುಟುಂಬ ಇತ್ತೀಚೆಗಷ್ಟೇ ಊರಿಗೆ ಮರಳಿತ್ತು. ದೂರದ ಊರಿಂದ ಬಂದ ಬಾಲಕನಿಗೆ ಇಲ್ಲಿಯ ಪರಿಸರ ಕಂಡು ಖುಷಿಯಾಗಿದ್ದಾನೆ. ಅಂತೆಯೇ ಲಾರೆನ್ ಮನೆಯ ಪಕ್ಕವೇ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಆತನ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದಾನೆ. ಪರಿಣಾಮ ಈಜಲು ಬಾರದೇ ಮೃತಪಟ್ಟಿದ್ದಾನೆ.

ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related