ಬೆಂಗಳೂರು: ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಇಂದು ಮತ್ತು ನಾಳೆ ವಿಶೇಷ ಆಚರಣೆ ನಡೆಸಲಾಗುತ್ತಿದೆ.
ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ಆಚರಿಸಲಾಗುವುದು. ಮನೆ-ಮನಗಳಲ್ಲಿ ಕೃಷ್ಣನ ಧ್ಯಾನ ನಡೆಸಲಾಗುವುದು.
ಇನ್ನು ನಮ್ಮ ರಾಜಧಾನಿ ಬೆಂಗಳೂರಿನಲ್ಲೂ ಸಹ ಕೃಷ್ಣನಿಗೆ ಮೀಸಲಾದ ವಿವಿಧ ವಿಷ್ಣು ದೇಗುಲಗಳಲ್ಲಿ ಜನ್ಮಾಷ್ಠಮಿಯ ಸಂಭ್ರಮ ನಡೆಯುತ್ತಿದೆ. ಕೃಷ್ಣನಿಗೆ ವಿವಿಧ ಅಲಂಕಾರ ನಡೆಸಿ, ಗೋಕುಲಾಷ್ಠಮಿಯ ಸಂಭ್ರಮ ಹೆಚ್ಚಿಸಲಾಗಿದೆ.
ಇಸ್ಕಾನ್ ದೇಗುಲದಲ್ಲಿ ಜನ್ಮಾಷ್ಠಮಿ ಅಂಗವಾಗಿ ಇಂದು ಮತ್ತು ನಾಳೆ ವಿವಿಧ ಕಾರ್ಯಕ್ರಮಗಳನ್ನು ಕೂಡ ಏರ್ಪಡಿಸಲಾಗಿದೆ.
ಈ ಹಿನ್ನಲೆ ಭಕ್ತರ ದಂಡು ಕೂಡ ದೇವಾಲಯದತ್ತ ಹರಿದು ಬಂದಿದೆ. ಕೃಷ್ಣನ ವಿವಿಧ ಅಲಂಕಾರಗಳನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಅಸಂಖ್ಯತ ಭಕ್ತರಿಗೆ ಸಿಹಿ ವಿತರಣೆ ಕೂಡ ನಡೆಸಲಾಗಿದೆ.