ಧಾರವಾಡ : ನಗರದ ಹೊರವಲಯದಲ್ಲಿ 70 ಅಡಿ ಬಾವಿಯಲ್ಲಿ ಬಿದ್ದ ನಾಗರ ಹಾವನ್ನು ನಜೀರ್ ಶೇಕ್ ಗುರುವಾರ ಹಗ್ಗದ ಮೂಲಕ ಗೆಳೆಯರ ಸಹಾಯದಿಂದ ಕೆಳಗೆ ಇಳಿದು ಹಾವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವು ಹಿಡಿಯುವುದು ಒಂದು ಕಲೆ. ಹಾವುಗಳನ್ನು ಹಿಡಿದು ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವುದರಲ್ಲಿ ರಾಜ್ಯದ ಸ್ನೇಕ್ ಶ್ಯಾಮ್, ಬೆಳ್ಳಿ ಪ್ರಕಾಶ್, ವಾ ಸುರೇಶ್ ಹೆಸರು ಹೆಚ್ಚಾಗಿ ಕೇಳಿಬರುತ್ತದೆ. ಆದರೆ ಧಾರವಾಡದ ನಜೀರ್ ಶೇಕ್ ಎಂಬ ಉರಗ ತಜ್ಞ. ತನ್ನ ಜೀವಮಾನದಲ್ಲಿ ಸುಮಾರು 4500 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.