ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ.!

ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ.!

ಬೆಂಗಳೂರು: ಸಿಎಂ ನಿನ್ನ ಸಿಡಿ ಬಿಟ್ಟು ಬಿಡ್ತೀನಿ ಅಂತ ರಾಜೀನಾಮೆ ನೀಡಿದ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಸಿಎಂ ಬಿಎಸ್‌ವೈ ಅವರನ್ನು ಹೆದರಿಸುತ್ತಿದ್ದಾರೆ. ಅಂಥ ಗಂಭಿರವಾದ ಆರೋಪವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.

ಇಂದು ಜನಧ್ವನಿ ರ್ಯಾಲಿಯಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿಯವರ ಸಿಡಿಯನ್ನು ನೋಡಿದರೆ ಅಸಹ್ಯವಾಗುತ್ತದೆ, ಇಂತಹವರು ಮಂತ್ರಿನಾ? ಯಡಿಯ್ಯೂರಪ್ಪನ ಮಂತ್ರಿ ಮಂಡಲದವರು ಅಂತ ಹೇಳಿದರು. ಇದೇ ವೇಳೆ ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದು, ನಮ್ಮ ಅಣ್ಣನಿಗೆ ಏನು ಆದ್ರು ಮಾಡಿದ್ರೆ, ನಿನ್ನ ಸಿಡಿ ಬಿಡುಗಡೆ ಮಾಡಬೇಕಾಗುತ್ತದೆ ಅಂತ ಹೆದರಿಸುತ್ತಿದ್ದಾರೆ ಆಂತ ಹೇಳಿದರು.

Related