60 ಸಾವಿರ ಲೀಡ್​ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು :ಸಿಎಂ

60 ಸಾವಿರ ಲೀಡ್​ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು :ಸಿಎಂ

 

ಮೈಸೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 18 ರಿಂದ 20 ಕ್ಷೇತ್ರಗಳನ್ನು ಗೆಲ್ಲಲೇ ಬೇಕೆಂದು ಹಠದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಇನ್ನು ನಿನ್ನೆ ಸೋಮವಾರದಿಂದ ಮೈಸೂರು, ಚಾಮರಾಜನಗರ ಮತ್ತು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಸಿಎಂ ಸ್ಥಾನದಲ್ಲಿ ಇರಬೇಕೋ ಬೇಡವೋ ಎಂದು ಸಾರ್ವಜನಿಕರಲ್ಲಿ ಕೇಳುತ್ತಿದ್ದಾರೆ.

ನಾನು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕಾದರೆ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮತ ಪ್ರಚಾರದಲ್ಲಿ ಕೇಳಿಕೊಳ್ಳುತ್ತಿದ್ದಾರೆ. 60 ಸಾವಿರ ಲೀಡ್​ ಬೇಕು, ಅಷ್ಟು ಲೀಡ್​ ಬಂದಿದ್ದೇ ಆದರೆ ಯಾರು ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ನಾನು ಇರಬೇಕೋ, ಬೇಡ್ವೋ ಎಂದು ಭಾವನಾತ್ಮಕವಾಗಿ ಅಸ್ತ್ರವಾಗಿ ಮತ ಯಾಚಿಸಿದ್ದರು.

 

Related