ಸಹಕಾರ ಸಂಘದ ಸಮೂಹಕ್ಕೆ 3.5 ಲಕ್ಷ ನೀಡಿಕೆ

ಸಹಕಾರ ಸಂಘದ ಸಮೂಹಕ್ಕೆ 3.5 ಲಕ್ಷ ನೀಡಿಕೆ

ಕೋಲಾರ : ತಾಲೂಕಿನ ಮಾರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಮೂಹ ಹಾಲು ಕರೆಯುವ ಯಂತ್ರಗಳ ಉದ್ಘಾಟನೆಯನ್ನು ಹಾಲು ಒಕ್ಕೂಟದ ತಾಲ್ಲೂಕಿನ ನಿರ್ದೇಶಕ ಡಿ.ವಿ. ಹರೀಶ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ, ಸಂಘಕ್ಕೆ ಒಕ್ಕೂಟದಿಂದ ರೂ. 3.5 ಲಕ್ಷ ಸಮೂಹ ಹಾಲು ಕರೆಯುವ ಯಂತ್ರಗಳ ಘಟಕಕ್ಕೆ ನೀಡಿದ್ದು, ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆಂದರು.

ಶಾಸಕ ಕೆ. ಆರ್. ರಮೇಶ್‌ಕುಮಾರ್, ಕೋಲಾರ ಶಾಸಕ ಕೆ. ಶ್ರೀನಿವಾಸಗೌಡರವರ ಮಾರ್ಗದರ್ಶನದಲ್ಲಿ ಹೋಳೂರು ಸುಗಟೂರು, ಹೋಬಳಿ ಹಾಲು ಉತ್ಪಾದಕರ ಸಹಕಾರ ಸಂಘಗಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಬಿ.ಎಂ.ಸಿ. ಕೇಂದ್ರಗಳ ಮುಖೇನ ಹಾಲು ಶೇಖರಣೆ ಮಾಡಲಾಗುತ್ತೆಂದರು.

Related