24 ಸಚಿವರ  ಪ್ರಮಾಣ ವಚನ

24 ಸಚಿವರ  ಪ್ರಮಾಣ ವಚನ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 2023 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ತನ್ನ ಗದ್ದುಗೆಯನ್ನು ಏರಿದೆ. ಕಳೆದ ವಾರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಪ್ರಮಾಣವಚನದ ಜೊತೆ ಎಂಟು 8 ಸಚಿವರ ಪ್ರಮಾಣವಚನ ಕೂಡ ಆಗಿತ್ತು. ಇದರ ಜೊತೆ ಇಂದು ರಾಜ್ ಭವನದಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟಕ್ಕೆ ಇಂದು ಶನಿವಾರ 24 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಸಕರಾದ ಎಚ್‌.ಕೆ.ಪಾಟೀಲ್‌, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಎಚ್‌.ಸಿ.ಮಹದೇವಪ್ಪ ಮತ್ತು ಇತರರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದವರು

ಹೆಚ್.ಕೆ.ಪಾಟೀಲ್

ಕೃಷ್ಣ ಭೈರೇಗೌಡ

ಎನ್​. ಚಲುವರಾಯಸ್ವಾಮಿ

ಕೆ.ವೆಂಕಟೇಶ್​

ಡಾ.ಹೆಚ್.ಸಿ.ಮಹದೇವಪ್ಪ

ಈಶ್ವರ ಖಂಡ್ರೆ

ಕೆ.ಎನ್.ರಾಜಣ್ಣ

ದಿನೇಶ್ ಗುಂಡೂರಾವ್

ಶರಣಬಸಪ್ಪ ದರ್ಶನಾಪುರ್

ಶಿವಾನಂದ ಪಾಟೀಲ್

ಆರ್.ಬಿ.ತಿಮ್ಮಾಪುರ

ಎಸ್.ಎಸ್.ಮಲ್ಲಿಕಾರ್ಜುನ

ಶಿವರಾಜ ತಂಗಡಗಿ

ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್

ಮಂಕಾಳು ವೈದ್ಯ

ಸಂತೋಷ್ ಲಾಡ್

ಎನ್​ ಎಸ್​ ಬೋಸೆರಾಜು

ಬೈರತಿ ಸುರೇಶ್

ಮಧು ಬಂಗಾರಪ್ಪ

ಎಂ.ಸಿ.ಸುಧಾಕರ್

ಬಿ.ನಾಗೇಂದ್ರ

ಲಕ್ಷ್ಮೀ ಹೆಬ್ಬಾಳ್ಕರ್

ರಹೀಂ ಖಾನ್

ಡಾ. ಸುಧಾಕರ್​

Related