195 ಮಂದಿ ಶೀಘ್ರ ತಾಯ್ನಾಡಿಗೆ

195 ಮಂದಿ ಶೀಘ್ರ ತಾಯ್ನಾಡಿಗೆ

ಬೀದರ್ : ಕೋವಿಡ್ 19 ಉದ್ಯೋಗ ಅರಸಿ ಕುವೈತ್ಗೆ ಹೋಗಿ ಸಚಿವ ಸುಬ್ರಹ್ಮಣ್ಯಂ ಜೈಶಂಕರ ಅವರು ಕುವೈತ್ನಲ್ಲಿ ಸಿಲುಕಿರುವ ಜಿಲ್ಲೆಯ 195 ಯುವಕರನ್ನು ಶೀಘ್ರ ತಾಯ್ನಾಡಿಗೆ ಕರೆ ತರುವ ಭರವಸೆ ನೀಡಿದ್ದಾರೆ. ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ನಾಲ್ಕು-ಐದು ದಿನಗಳ ಹಿಂದೆ ವಿದೇಶಾಂಗ ಸಚಿವರನ್ನು ಸಂಪರ್ಕಿಸಿದ ಕಚೇರಿಯು ಅಲ್ಲಿನ ಮೇಘಾ ಎಂಜಿನಿಯರಿAಗ್ ಕಂಪನಿಗೆ ನೋಟಿಸ್ ಕೊಟ್ಟಿದೆ. ನೋಟಿಸ್ ಪಡೆದ ತಕ್ಷಣ ಕಂಪನಿಯವರು ಜಿಲ್ಲೆಯ ಯುವಕರನ್ನು ಭೇಟಿ ಮಾಡಿ ಎಲ್ಲರನ್ನೂ ಭಾರತಕ್ಕೆ ವಾಪಸ್ ಕಳುಹಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸೋಂಕಿನ ಪ್ರಯುಕ್ತ ಸದ್ಯ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆಗಸ್ಟ್ ಎರಡನೇ ವಾರದಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ಶುರುವಾಗಲಿದೆ. ವಿಮಾನಯಾನ ಆರಂಭವಾದ ಕೂಡಲೇ ಜಿಲ್ಲೆಯ ಯುವಕರನ್ನು ಕರೆ ತರಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕುವೈತ್ನಲ್ಲಿ ಇರುವ ಯುವಕರನ್ನು ವಾಟ್ಸ್ಆಯಪ್ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತಂದಿದೆ. ಧೈರ್ಯದಿಂದ ಇರುವಂತೆ ತಿಳಿಸಿದ್ದೇನೆ. ಹೀಗಾಗಿ ಕುವೈತ್ನಲ್ಲಿ ಸಿಲುಕಿಕೊಂಡವರ ಪಾಲಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

Related