ಅಕ್ರಮಗಳನ್ನು ತಡೆಗಟ್ಟಿ – ಬಿ ಎಸ್ ಕಡಕಭಾವಿ

  • In State
  • August 1, 2021
  • 1099 Views
ಅಕ್ರಮಗಳನ್ನು ತಡೆಗಟ್ಟಿ – ಬಿ ಎಸ್ ಕಡಕಭಾವಿ

ಮುದ್ದೇಬಿಹಾಳ – ತಾಲೂಕಿನ ಅಗಸಬಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರ ಮನೆಯವರಾದ ಕನಕಪ್ಪ ನಿಂಗಪ್ಪ ದೊಡಮನಿ ಅಂಗನವಾಡಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ನೀಡುವ ಆಹಾರದ ಧಾನ್ಯಗಳನ್ನು ಮುದ್ದೇಬಿಹಾಳ ಪಟ್ಟಣದಲ್ಲಿರುವ ತಮ್ಮ ಮನೆಗೆ ಅಕ್ರಮವಾಗಿ ಸಾಗಿಸುತ್ತಿರುವ ಸಂದರ್ಭದಲ್ಲಿ ಗ್ರಾಮದ ಜನರು ಅವರನ್ನು ಹಿಡಿದು ಬುದ್ಧಿವಾದ ಹೇಳಿ ಸಿಡಿಪಿಓ ದೂರ ನೀಡಲಾಗಿತು.

ಆದರೆ ಸಂಬಂಧಪಟ್ಟ ಅಧಿಕಾರಿಗಳು ಅವರ ಮೇಲೆ ಯಾವೂದೆ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಗಸಬಾಳ ಗ್ರಾಮಸ್ಥರು ಶನಿವಾರ ತಹಶಿಲ್ದಾರ ಬಿ.ಎಸ್. ಕಡಕಭಾವಿಯವರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಈ ಬಗ್ಗೆ ದೂರು ನೀಡಿದರೆ, ಅಂಗನವಾಡಿ ಕಾರ್ಯಕರ್ತೆ ಸ್ಥಳಿಯ ಪೋಲಿಸ್ ಠಾಣೆಗೆ ತೆರಳಿ ಗ್ರಾಮಸ್ಥರ ವಿರುದ್ದ ದೂರು ನೀಡಿದ್ದಾರೆ. ತಹಶಿಲ್ದಾರರು ತಾವೂ ಅಗಸಬಾಳ ಗ್ರಾಮಕ್ಕೆ ಬೇಟಿ ನೀಡಿ ಪರೀಶಿಲನೆ ನಡೆಸಿ ಯಾರ ತಪ್ಪಾಗಿದೆ ಎಂಬುದನ್ನು ತಿಳಿದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ  ಕೈಗೊಳ್ಳಬೆೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಮುಖಂಡರಾದ ಅರವಿಂದ ಕಾಶಿನಕುಂಟಿ, ಮತ್ತಿತರರು ಇದ್ದರು.

Related