ನಿಮ್ಮ ರಕ್ಷಣೆ ಅಭಿವೃದ್ಧಿ ನಮ್ಮದು, ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿಮ್ಮದು: ಮಾದೇವಪ್ಪ

ನಿಮ್ಮ ರಕ್ಷಣೆ ಅಭಿವೃದ್ಧಿ ನಮ್ಮದು, ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿಮ್ಮದು: ಮಾದೇವಪ್ಪ

ಚಾಮರಾಜನಗರ: ನಿಮ್ಮ ರಕ್ಷಣೆಯ, ಅಭಿವೃದ್ಧಿ ಮಾಡುವ ಜವಾಬ್ದಾರಿ ನಮ್ದು, ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿಮ್ಮದು, ಇದು ನಮ್ಮ ನಿಮ್ಮ ನಡುವೆ ಒಪ್ಪಂದ ಎಂದು ಸಚಿವ ಎಚ್ ಸಿ ಮಾದೇವಪ್ಪ ಅವರು ಚಾಮರಾಜನಗರದ ಮತದಾರರಿಗೆ ಹೇಳಿದ್ದಾರೆ.

ಚಾಮರಾಜನಗರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರ ಪರವಾಗಿ ಇಂದು ಶುಕ್ರವಾರ ಏಪ್ರಿಲ್ 19ರಂದು ಹನೂರು ವಿಧಾನಸಭಾ ಕ್ಷೇತ್ರದ ಕುರ್ಚಿ ಹತ್ತಿರ ಮಧುವನಹಳ್ಳಿ ಎಲ್ಲಿ ಸುನಿಲ್ ಬೋಸ್ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಬಿಜೆಪಿ ಪಕ್ಷದ ಆಡಳಿತದಿಂದ ಕಳೆದ ಹತ್ತು ವರ್ಷದಿಂದ ಬೇಸತ್ತಿರುವ ಜನರಿಗೆ ಹೊಸ ಬದಲಾವಣೆ ಬೇಕಾಗಿದೆ. ಹಾಗಾಗಿ ಅತ್ಯುತ್ತಮ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು. ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಹೇಳಿದರು.

ಇನ್ನು ದೇಶದಲ್ಲಿ ಸಾಮಾನ್ಯ ಜನರು ಬದುಕುವುದು ಬಹಳ ಕಷ್ಟವಾಗಿದೆ. ಬಿಜೆಪಿಯವರು ದೀನ ದಲಿತರ, ಮಹಿಳೆಯರ, ರೈತರ ಪರವಾಗಿ ನಿಲ್ಲದೆ ಕೇವಲ ಶ್ರೀಮಂತರ ಪರವಾಗಿ ನಿಂತಿದೆ. ಬಿಜೆಪಿ ಅವ್ರ ಕಣ್ಣಲ್ಲಿ ರಾಜ್ಯದಲ್ಲಿರುವ ಹಳ್ಳಿಗಳು ಕಾಣೋದಿಲ್ಲ, ಹಳ್ಳಿಗಳಲ್ಲಿ ವಾಸಿಸುತ್ತಿರುವ ಬಡವರಂತೂ ಬಿಜೆಪಿಯವರ ಕಣ್ಣಿಗೆ ಕಾಣುವುದೇ ಇಲ್ಲ ಎಂದು ಬಿಜೆಪಿ ಅವರ ವಿರುದ್ಧ ಆಕ್ರೋಶ ಅವರ ಹಾಕಿದ್ದಾರೆ.

ಇಂದಿರಾ ಗಾಂಧಿಯವರು ಅವರ ಆಡಳಿತವಿದ್ದಾಗಲೇ ದೇಶದಲ್ಲಿರುವ ಬಡತನ ನಿರ್ಮೂಲನೆ ಯಾಗಬೇಕೆಂದು ಹೋರಾಡಿದರು. ಆದರೆ ಬಿಜೆಪಿಯವರು ಬಡವರನ್ನು ಲೆಕ್ಕಿಸದೆ ಕೇವಲ ಶ್ರೀಮಂತರ ಪರವಾಗಿ ಆಡಳಿತ ನಡೆಸುತ್ತಿದ್ದಾರೆ. ಹಿಂದುಳಿದ ಜನತೆಗೆಲ್ಲ ಮೀಸಲಾತಿ ಕೊಡಬೇಕೆಂದು ಮಂಡಲ ಕಮಿಟಿ ಜಾರಿಯಾಯಿತು. ಆದರೆ ಬಿಜೆಪಿಯವರು ಮಂಡಲ ಕಮಿಟಿ ಬೇಡ ಎಂದು ಆ ಕಾಲದಲ್ಲಿಯೋ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿಯವರಿಗೆ ನೀವು ಮತ ನೀಡಬೇಕಾಗಿ ಎಂದು ಮತದಾರರಲ್ಲಿ ಪ್ರಶ್ನಿಸಿದರು. ಬಡವ, ದೀನದಲಿತ, ಹಿಂದುಳಿದ ವರ್ಗಕ್ಕೆ ಬೆನ್ನೆಲುಬಾಗಿ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಸಾವಿರಾರು ಜನ ಕಾರ್ಯಕರ್ತರಿಗೆ ಸಚಿವ ಮಾದೇವಪ್ಪ ಅವರು ಮನವಿ ಮಾಡಿದರು.

Related