ಯಾರೇ ಎಷ್ಟೇ ಗಿಮಿಕ್ ಮಾಡಿದರು ನಾವೇ ಗೆಲ್ಲೋದು: ವಿನಯ್ ಕುಲಕರ್ಣಿ

ಯಾರೇ ಎಷ್ಟೇ ಗಿಮಿಕ್ ಮಾಡಿದರು ನಾವೇ ಗೆಲ್ಲೋದು: ವಿನಯ್ ಕುಲಕರ್ಣಿ

ಧಾರವಾಡ: ಜನರು ಒಬ್ಬ ನಾಯಕನನ್ನು ಆಯ್ಕೆ ಮಾಡಬೇಕಾದರೆ ಆ ನಾಯಕನ ಮೇಲೆ ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ ಎಂಬ ನಂಬಿಕೆ ಮೇಲೆ ಮತ ನೀಡುತ್ತಾರೆ. ಆದರೆ ಕಳೆದ ಐದು ವರ್ಷ ಪ್ರಹ್ಲಾದ್ ಜೋಶಿಯವರು ಧಾರವಾಡ ಅಭಿವೃದ್ಧಿಯಲ್ಲಿ ಅವರ ಕಾರ್ಯ ಕೇವಲ ಶೂನ್ಯ ವೆಂದು ಶಾಸಕ ವಿನಯ್ ಕುಲಕರ್ಣಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಎಷ್ಟೇ ಗಿಮಿಕ್ ಮಾಡಿದರು ನಾವೇ ಗೆಲ್ಲೋದು. ಕ್ಷೇತ್ರದ ಜನರು ಈ ಬಾರಿ ಬದಲಾವಣೆಯನ್ನ ಬಯಸಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಜನರು ನಮ್ಮ ಪರವಾಗಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಜನರಲ್ಲಿ ವಿಶ್ವಾಸವಿದೆ. ಸಾಕಷ್ಟು ಬಿಜೆಪಿ ನಾಯಕರು ಜೋಶಿಯವರನ್ನ ಸೋಲಿಸಲು ನಮ್ಮ‌ಜೊತೆ ಸಾಥ್ ಕೊಟ್ಟಿದ್ದಾರೆ. ಜೋಶಿ ಲಿಂಗಾಯತ ಸಮುದಾಯವನ್ನ ತುಳಿದಿದ್ದಾರೆ. ಯಡಿಯೂರಪ್ಪ ಅವರನ್ನ ತುಳಿದಿದ್ದು ಇದೇ ಜೋಶಿ. ಜಗದೀಶ್ ಶೆಟ್ಟರ್, ಚಿಕ್ಕನಗೌಡ್ರ.. ಹೀಗೆ ಲಿಂಗಾಯತ ನಾಯಕರನ್ನು ತುಳಿಯುತ್ತಾ ಬಂದಿದ್ದಾರೆ ಎಂದು ಕಿಡಿಕಾರಿದರು.

200% ನಾನು ದಾಖಲೆ ಬಿಡುಗಡೆ ಮಾಡುತ್ತೇನೆ. ಎಲ್ಲ ಸ್ವಾಮೀಜಿಗಳಿಗೆ ಪ್ಯಾಕೆಟ್ ಕೊಡುವ ವ್ಯವಸ್ಥೆಯನ್ನ ಜೋಶಿ ಮಾಡಿದ್ದಾರೆ. ನಮ್ಮ ಪಕ್ಷದ ಪಾಲಿಕೆ ಸದಸ್ಯರುಗಳಿಗೆ ಪ್ರಲ್ಹಾದ್ ಜೋಶಿ ದುಡ್ಡು ಹಂಚುತ್ತಿದ್ದಾರೆ. ಸದ್ಯ ಅವರಿಗೆ ಈ ಬಾರಿ ಸೋಲಿನ ಭಯವಿದೆ. ಯಾರಿಗೆ ಎಷ್ಟೇ ಹಣ ಆಮಿಷೆ ತೋರಿಸಿದರೂ ನಮ್ಮ ಮತಗಳು ಎಲ್ಲಿಯೂ ಹೋಗಲ್ಲ. ಬೇಕಾದರೆ ಇಬ್ಬರು ಪಕ್ಷೇತರರಾಗಿ ಸ್ಪರ್ಧೆ ಮಾಡೋಣ ಯಾರ ಗೆಲ್ಲುತ್ತಾರೆ ನೋಡೋಣ ಎಂದು ಪ್ರಲ್ಹಾದ್ ಜೋಶಿಗೆ ಸವಾಲು ಹಾಕಿದರು.

 

Related