ಏನಿದು ಯೋಗಿಕೊಳ್ಳದ ಏಡಿ ಮಹಿಮೆ?

  • In State
  • March 1, 2020
  • 389 Views
ಏನಿದು ಯೋಗಿಕೊಳ್ಳದ ಏಡಿ ಮಹಿಮೆ?

ಬೆಳಗಾವಿ, ಮಾ.01 : ಭೂಮಂಡಲದಲ್ಲಿ ದೇವರು ಇದ್ದಾನೆಂದು ಮನುಷ್ಯ ಹೇಗೆ ನಂಬಿದ್ದಾನೋ ಅದರಂತೆ ವಿಸ್ಮಯಗಳು ಕೂಡ ನಡೆಯುತ್ತಿರುವುದು ಸತ್ಯ. ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ಏಡಿ ಸಹ ಪೂಜೆ ಸಮಯಕ್ಕೆ ಬಂದು ಪ್ರಸಾದ ತಿಂದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಬಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ನೂರಾರು ಅಡಿ ಎತ್ತರದ ಬಂಡೆಯ ಗೂಹೆಯೊಂದರಲ್ಲಿ ಗಂಗಾಮಾತೆ ನೆಲೆಸಿದ್ದಾಳೆ. ಗಂಗಾಮಾತೆಗೆ ಪ್ರತಿದಿನ ಪೂಜೆ ನಡೆಯುತ್ತದೆ. ಈ ಪೂಜಾ ಸಮಯದಲ್ಲಿ ವಿಶೇಷ ಅತಿಥಿಯಾಗಿ ಏಡಿ ಪ್ರತ್ಯಕ್ಷವಾಗುತ್ತೆ. ಪೂಜೆಯ ಪ್ರಸಾದ ತಿಂದು ನಂತರ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಗಂಗಾಮಾತೆಯ ಪೂಜಾ ವೇಳೆ ಏಡಿಯ ಈ ನಡೆಯನ್ನು ನೋಡಿ ಅರ್ಚಕರೇ ಬೆರಗಾಗಿದ್ದಾರೆ.

Related