ದಾಸರಹಳ್ಳಿ : ಪ್ರಧಾನಿ ನರೇಂದ್ರ ಮೋದಿಯವರು 18ರ ವಯಸ್ಸಿನಿಂದ 44 ವರ್ಷದ ಒಳಗಿನ ಎಲ್ಲರಿಗೂ ಲಸಿಕೆ ಸಿಗಲಿ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗಲಿ ಎಂದು ಲಸಿಕಾ ವಿತರಣಾ ಮೇಳ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಎಸ್ ಮುನಿರಾಜು ತಿಳಿಸಿದರು.
ಗುರುಹಿತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಲಸಿಕಾ ವಿತರಣಾ ಮೇಳ, ಎರಡನೇ ಬಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲನೆ ಹಂತದಲ್ಲಿ 350ರಿಂದ 400 ಜನರಿಗೆ ಹಾಗೂ ಎರಡನೇ ಹಂತದಲ್ಲಿ 500 ರಿಂದ 600 ಜನರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.
ಗುರು ಹಿತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಿ ಗುರುಪ್ರಸಾದ್, ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಮಧುಸೂದನ್, ಬಿ ಎಂ ಕೃಷ್ಣ, ನಾರಾಯಣ್, ಕೃಷ್ಣಕುಮಾರ್, ವಿನೋದ್ ಗೌಡ, ನರ್ಮಲ, ಮುಂತಾದವರಿದ್ದರು.