ಕುತೂಹಲ ಹೆಚ್ಚಿಸಿದ ಸಾಯಿ ಪಲ್ಲವಿ ರಣಬೀರ್ ಕಪೂರ್ ಫೋಟೋಸ್..!

ಕುತೂಹಲ ಹೆಚ್ಚಿಸಿದ ಸಾಯಿ ಪಲ್ಲವಿ ರಣಬೀರ್ ಕಪೂರ್ ಫೋಟೋಸ್..!

ಇಡೀ ಬಾಲಿವುಡ್ ಚಿತ್ರರಂಗದಲ್ಲೆ ಅತಿ ಹೆಚ್ಚು ಕುತೂಹಲ ಕೆರಳಿಸಿದ ಚಿತ್ರವೆಂದರೆ ಅದು ರಾಮಾಯಣ. ರಾಮಾಯಣ ಚಿತ್ರಿಕರಣ ಈಗಾಗಲೇ ಏಪ್ರಿಲ್ ಮೊದಲ ವಾರದಿಂದಲೇ ಪ್ರಾರಂಭವಾಗಿದ್ದು ಈ ಚಿತ್ರಕ್ಕೆಂದು ಮುಂಬೈನಲ್ಲಿ ಬೃಹತ್ ಸೆಟ್ ಅನ್ನು ನಿರ್ಮಾಣ ಮಾಡಲಾಗಿದ್ದು, ಚಿತ್ರೀಕರಣದ ಕೆಲವು ಫೋಟೋಗಳು ಈಗ ವೈರಲ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಯೆಸ್.. ನಟಿ ಸಾಯಿ ಪಲ್ಲವಿ ಮತ್ತು ನಟ ರಣಬೀರ್ ಕಪೂರ್ ಚಿತ್ರೀಕರಣದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಅಭಿಮಾನಿಗಳಲ್ಲಿ ರಾಮಾಯಣ ಸಿನಿಮಾದ ಮೇಲೆ ಇನ್ನಷ್ಟು ಕುತೂಹಲ ಕೆರಳಿಸಿವೆ.

ಇದನ್ನೂ ಓದಿ: ರಾಜಕೀಯ ರಂಗಕ್ಕೆ ಸೇರುವ ಬಗ್ಗೆ ಡಿಕೆಶಿ ಪುತ್ರಿ ಹೇಳಿದ್ದೇನು?

ಇತ್ತೀಚೆಗೆ, ಕೈಕೇಯಿಯಾಗಿ ಲಾರಾ ದತ್ತಾ ಮತ್ತು ಮಂಥರಾ ಪಾತ್ರದಲ್ಲಿ ಶೀಬಾ ಚಡ್ಡಾ ಅವರ ಕೆಲವು ಚಿತ್ರಗಳು ಸಹ ಸೆಟ್‌ಗಳಿಂದ ಸೋರಿಕೆಯಾಗಿದ್ದವು. ಮುಂಬೈನಲ್ಲಿ ನಿರ್ಮಿಸಿರುವ ಭವ್ಯ ಸೆಟ್‌ನಲ್ಲಿ ರಾಮನ ಜನ್ಮ, ಗುರುಕುಲ, ರಾಮ-ಸೀತಾ ವಿವಾಹದಂತಹ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ರಾವಣ ಮತ್ತು ಹನುಮಾನ ಪಾತ್ರದಲ್ಲಿ ಯಶ್ ಮತ್ತು ಸನ್ನಿ ಡಿಯೋಲ್ ಜುಲೈನಿಂದ ತಮ್ಮ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಾಮಾಯಣದ ಮುಂದಿನ ವೇಳಾಪಟ್ಟಿಯನ್ನು ಲಂಡನ್‌ನಲ್ಲಿ ಚಿತ್ರೀಕರಿಸಬಹುದು.

Related