ಮಳೆಯ ಅಬ್ಬರಕ್ಕೆ ಉತ್ತರಾದಿಮಠ ಜಲಾವೃತ

ಮಳೆಯ ಅಬ್ಬರಕ್ಕೆ ಉತ್ತರಾದಿಮಠ ಜಲಾವೃತ

ಸೇಡಂ : ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿರುವುದರಿಂದ ಜನ ತತ್ತರಿಸಿದ್ದಾರೆ.

ಹೆಚ್ಚುತ್ತಿರುವ ಮಳೆಯ ಆರ್ಭಟದ ಜೊತೆಗೆ ಉಕ್ಕಿ ಹರಿಯುತ್ತಿರುವ ಹಳ್ಳ, ಕೊಳ್ಳಗಳು, ನದಿಗಳಿಂದ ಜನರು ಕಂಗಾಲಾಗಿದ್ದಾರೆ. ಮಳಖೇಡ ಸೇತುವೆ ಮೇಲೆ ನೀರು ಬಂದಿರುವುದರಿಂದ ರಾಜ್ಯಹೆದ್ದಾರಿ-10 ಕಲಬುರ್ಗಿ-ಸೇಡಂ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿನ ಸಂಚಾರ ಬುಧವಾರ ಸ್ಥಗಿತಗೊಂಡಿದೆ.

ಮಳಖೇಡನ ಕೋಲಿವಾಡದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಾಮಗ್ರಿ, ಸೇರಿದಂತೆ ದವಸ ಧಾನ್ಯಗಳ ಸುರಕ್ಷತೆಗೆ ಹರಸಾಹಸ ಪಡುವಂತಾಗಿದೆ.
ಮಳಖೇಡನಿಂದ ಸಂಗಾವಿ (ಎಂ) ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ, ತಾಲ್ಲೂಕಿನ ಸಟಪಟನಹಳ್ಳಿ ಸೇತುವೆ ಮುಳುಗಡೆಯಾಗಿದೆ. ಅತಿವೃಷ್ಟಿಯಿಂದಾಗಿ ಜನ ಜೀವನ ಹಾಗೂ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸುರಕ್ಷತೆಯತ್ತ ತೆರಳುತ್ತಿದ್ದಾರೆ. ಭೀಕರ ಮಳೆಯಿಂದಾಗಿ ತಾಲ್ಲೂಕಿನಲ್ಲಿರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತಿದೆ.

Related