ಮಾಂಗಲ್ಯಂ ತಂತುನಾನೇನ

ಮಾಂಗಲ್ಯಂ ತಂತುನಾನೇನ

ಲಕ್ನೋ, ಮಾ. 4 : ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಮದುವೆಯಾಗಲು ದೇವಸ್ಥಾನಕ್ಕೆ ಬಂದಿದ್ದಾನೆ. ಆದ್ರೆ ಅಲ್ಲಿಗೆ ಹಳೆ ಪ್ರೇಯಸಿ ಕೂಡ ಬಂದಿದ್ದಳು. ಮೂವರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಇಬ್ಬರು ಹುಡುಗಿಯರ ಹಣೆಗೆ ಸಿಂಧೂರವನ್ನಿಟ್ಟು ಇಬ್ಬರನ್ನೂ ಹುಡುಗ ಮದುವೆಯಾಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ.
ಯುವಕ, ಯುವತಿಯೊಬ್ಬಳ ಪ್ರೀತಿಗೆ ಬಿದ್ದಿದ್ದನಂತೆ. ಯುವತಿ ಮದುವೆಯಾಗುವಂತೆ ಒತ್ತಡ ಹೇರಿದ್ದಳಂತೆ. ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಳಂತೆ. ಎರಡು ದಿನ ಜೈಲಿನಲ್ಲಿದ್ದು, ಬಂದಿದ್ದ ಯುವಕ ಯುವತಿ ಜೊತೆ ಮದುವೆಗೆ ಮುಂದಾಗಿದ್ದ. ಆದ್ರೆ ಇದಕ್ಕೂ ಮುನ್ನ ನಾಲ್ಕೈದು ವರ್ಷಗಳಿಂದ ಪ್ರೀತಿ ಮಾಡ್ತಿದ್ದ ಇನ್ನೊಂದು ಪ್ರಿಯತಮೆ ಇವರನ್ನು ನೋಡಿದ್ದಾಳೆ. ಗಲಾಟೆ ಮಾಡಿದ್ದಲ್ಲದೆ ದೇವಸ್ಥಾನಕ್ಕೆ ಬಂದಿದ್ದಾಳೆ. ಇಬ್ಬರನ್ನು ನೋಡಿದ ಯುವಕ ಇಬ್ಬರಿಗೂ ತಾಳಿ ಕಟ್ಟಿದ್ದಾನೆ.

Related