ಮೋಜು-ಮಸ್ತಿಗಾಗಿ ನದಿಗೆ ಇಳಿದ ವಿದ್ಯಾರ್ಥಿಗಳು ಸಾವು

ಮೋಜು-ಮಸ್ತಿಗಾಗಿ ನದಿಗೆ ಇಳಿದ ವಿದ್ಯಾರ್ಥಿಗಳು ಸಾವು

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿಯಲ್ಲಿ ರಥಬೀದಿಯ ರಾಮಕೊಂಡದ ಎದುರು ತುಂಗಾ ನದಿಗೆ ಇಳಿದ ಇಬ್ಬರು ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹುಟ್ಟು ಹಬ್ಬ ಆಚರಿಸಿಕೊಂಡ ನಂತರ ಪಾರ್ಟಿ ಮಾಡಿ,  ಮೋಜು-ಮಸ್ತಿಗೆ ನದಿಗೆ ಸ್ನಾನಕ್ಕೆ ಹೋಗಿ ,ಆಳ ತಿಳಿಯದೇ ಮುಳುಗಿ ದಾರುಣವಾಗಿ ಸಾವನ್ನಪ್ಪಿರು ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ಶೃಂಗೇರಿಯ ಕಿರಣ್ ಹಾಗೂ ಮಾಸ್ತೀಕಟ್ಟೆಯ ನೀಲಕಂಠ ಎಂದು ಗುರ್ತಿಸಲಾಗಿದೆ.

ಇದೀಗ ಮೃತ  ವಿದ್ಯಾರ್ಥಿಗಳ  ಶವಗಳನ್ನು ಹೊಳೆಯಿಂದ  ಹೊರಗೆ  ತೆಗೆಯಲಾಗಿದ್ದು,

ಈ ವೇಳೆ ತೀರ್ಥಹಳ್ಳಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ.

Related