ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿಯಲ್ಲಿ ರಥಬೀದಿಯ ರಾಮಕೊಂಡದ ಎದುರು ತುಂಗಾ ನದಿಗೆ ಇಳಿದ ಇಬ್ಬರು ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹುಟ್ಟು ಹಬ್ಬ ಆಚರಿಸಿಕೊಂಡ ನಂತರ ಪಾರ್ಟಿ ಮಾಡಿ, ಮೋಜು-ಮಸ್ತಿಗೆ ನದಿಗೆ ಸ್ನಾನಕ್ಕೆ ಹೋಗಿ ,ಆಳ ತಿಳಿಯದೇ ಮುಳುಗಿ ದಾರುಣವಾಗಿ ಸಾವನ್ನಪ್ಪಿರು ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಶೃಂಗೇರಿಯ ಕಿರಣ್ ಹಾಗೂ ಮಾಸ್ತೀಕಟ್ಟೆಯ ನೀಲಕಂಠ ಎಂದು ಗುರ್ತಿಸಲಾಗಿದೆ.
ಇದೀಗ ಮೃತ ವಿದ್ಯಾರ್ಥಿಗಳ ಶವಗಳನ್ನು ಹೊಳೆಯಿಂದ ಹೊರಗೆ ತೆಗೆಯಲಾಗಿದ್ದು,
ಈ ವೇಳೆ ತೀರ್ಥಹಳ್ಳಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ.