ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಕೂಗು!

ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಕೂಗು!

ದಾವಣಗೆರೆ: ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಜೋರಾಗಿ ಕೇಳುತಿದ್ದು ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಮತ್ತೆ ಸಿಎಂ ಬದಲಾವಣೆಯ ಚರ್ಚೆ ಹುಟ್ಟು ಹಾಕಿದ್ದಾರೆ. ಸಂಪುಟ ವಿಸ್ತರಣೆ ಆಥವಾ ಪುನಾರಚನೆ ಆದರೆ ಸಾಕಾ ಎಂದು ಕೇಳುವ ಮೂಲಕ ಸಿಎಂ ಬದಲಾವಣೆಯೂ ಬೇಕು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ನಗರದಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಿವಗಂಗಾ, ಕ್ಯಾಬಿನೆಟ್ ಪುನಾರಚನೆಯಾಗಿ ಎಲ್ಲರಿಗೂ 20 ತಿಂಗಳು ಸಚಿವ ಸ್ಥಾನ ಸಿಗಬೇಕು ಎಂಬ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬೇಲೂರು ಅಣ್ಣ ಹೇಳಿರೋದು ನೂರಕ್ಕೆ ನೂರಷ್ಟು ಸರಿ ಇದೆ. ಅವಕಾಶ ಎಲ್ಲರಿಗೂ ಸಿಗಬೇಕೇ ವಿನಃ ಅದು ನಿಂತ ನೀರಾಗಬಾರದು ಎಂದು ಅಧಿಕಾರ ಹಂಚಿಕೆಯ ಮಾತುಗಳನ್ನಾಡಿದರು.

 

Related