ಬಾಗಲಕೋಟೆ : ಕಮತಗಿ ಪಟ್ಟಣದ ಹೊಳೆಹುಚ್ಚೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಣ ಕೊಟ್ಟು ಅದು ವಾಪಸ್ಸು ಬರಲಿಲ್ಲ ಅಂದ್ರೆ ಅದೆಷ್ಟೋ ಸಮಸ್ಯೆಗಳು ಎದುರಾಗುತ್ತೆ. ಇಲ್ಲೊಬ್ಬ ಶಿಕ್ಷಕ ಇಂಥದ್ದೇ ಸಮಸ್ಯೆ ಮೈಮೇಲೆ ಎಳೆದುಕೊಂಡು ಸಾವು ತಂದುಕೊಂಡಿದ್ದಾರೆ. ಹನುಮಂತ ಪೂಜಾರ ಮೃತ ಶಿಕ್ಷಕ.
ಆತ್ಮಹತ್ಯೆ ಮಾಡಿಕೊಂಡ ಹನುಮಂತ ಅವರು ಡೆತ್ ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ತಾನು ಕೊಟ್ಟ ಸಾಲವೇ ಕಾರಣ ಎಂದು ಬರೆದಿಟ್ಟಿದ್ದಾರೆ. ತಿಮ್ಮಪ್ಪ ಬಸಪ್ಪ ಹಗೆದಾಳ ಕಮತಗಿ ಎಂಬಾತನೇ ನನ್ನ ಸಾವಿಗೆ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ವಾಪಸ್ಸು ಕೇಳಿದ್ರೆ ಕೊಡ್ತಿಲ್ಲ ಎಂದು ಬರೆದಿದ್ದಾರೆ.