ವಾಮಾಚಾರ! ಬೆಚ್ಚಿಬಿದ್ದ ಗ್ರಾಮಸ್ಥರು

ವಾಮಾಚಾರ! ಬೆಚ್ಚಿಬಿದ್ದ ಗ್ರಾಮಸ್ಥರು

ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲ್ಲೆಗೌಡನಹಳ್ಳಿ ಕಾಲನಿಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಸುವಿನ ಹೊಟ್ಟೆ ಬಗೆದು, ಕಿವಿ, ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾರೆ.

ಅಷ್ಟಕ್ಕೂ ಇಂತಜ ಅಮಾನವೀಯ ಘಟನೆ ನಡೆದಿರುವುದು ವಾಮಾಚಾರಕ್ಕಂತೆ! ಭೀಕರ ದೃಶ್ಯಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಗೋಪಾಲಪ್ಪ ಎಂಬುವರಿಗೆ ಸೇರಿದ ಒಂದೂವರೆ ವರ್ಷದ ಹಸು ಬಲಿಯಾಗಿದೆ. ಹಸುವನ್ನ ಅಮಾನುಷವಾಗಿ ಕೊಂದು ಗೋಡೆ ಮೇಲೆ ರಕ್ತದಿಂದ ಚಿತ್ತಾರ ಬಿಡಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ತಡರಾತ್ರಿಯಲ್ಲಿ ಹಸುವನ್ನ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮೇಲ್ನೋಟಕ್ಕೆ ವಾಮಾಚಾರ, ಮಾಟಮಂತ್ರಕ್ಕಾಗಿ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related