ಯಾದಗಿರಿ : ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪರ್ಚನೆ ಮಾಡುವ ಮೂಲಕ ಶನಿವಾರ ಜಯಂತಿ ಸರಳವಾಗಿ ಆಚರಿಸಲಾಯಿತು. ವಾಲ್ಮೀಕಿಯವರ ಆರ್ಶಗಳನ್ನು ಪಾಲನೆ ಮಾಡಲು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಉಪಕರ್ಯರ್ಶಿ ಮುಕ್ಕಣ್ಣ ಕರಿಗಾರ, ಲೆಕ್ಕಾಧಿಕಾರಿ ವೆಂಕಟೇಶ, ಅಧೀಕ್ಷಕ ಅಶೋಕ ಕಲಾಲ್, ಮನರೆಗಾದ ಅಧಿಕಾರಿ ಬಸವಲಿಂಗ ಸೇರಿದಂತೆ ಸಿಬ್ಬಂದಿ ಇದ್ದರು.