ಲಸಿಕೆ ಪಡೆಯದವರಿಗೆ ರೇಷನ್ ಇಲ್ಲ

ಲಸಿಕೆ ಪಡೆಯದವರಿಗೆ ರೇಷನ್ ಇಲ್ಲ

ಚಿಕ್ಕಬಳ್ಳಾಪುರ: ಕೋವಿಡ್ ನಿಯಂತ್ರಣ ಹಿನ್ನೆಲೆ, ಚಿಂತಾಮಣಿ ತಾಲೂಕು ಆಡಳಿತ ನೂತನ ಪ್ರಯೋಗಕ್ಕೆ ಮುಂದಾಗಿದೆ. ಕೋವಿಡ್ ಲಸಿಕೆ ಪಡೆಯದವರಿಗೆ ಆಗಸ್ಟ್, ಸೆಪ್ಟೆಂಬರ್ ತಿಂಗಳ ಪಡಿತರ(ರೇಷನ್) ಕೊಡುವುದಿಲ್ಲ ಎಂಬ ನಿರ್ಣಯಕೊಂಡಿದೆ.

ಗ್ರಾಮಗಳಲ್ಲಿ ಈ ವಿಚಾರವನ್ನು ಡಂಗೂರದ ಮೂಲಕ ಪ್ರಚಾರ ಮಾಡಲಾಗುತ್ತಿದ್ದು, ೧೮ ವರ್ಷ ಮೇಲ್ಪಟ್ಟವರು ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಕೊಟ್ಟರೆ ಮಾತ್ರ ರೇಷನ್ ವಿತರಿಸಲು ತೀರ್ಮಾನಿಸಲಾಗಿದೆ.

ವ್ಯಾಕ್ಸಿನ್ ಪಡೆದ ಪಡಿತರದಾರರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರಿಂದ ಪಡೆದುಕೊಳ್ಳಲು ತಾಲೂಕು ಆಡಳಿತ ಮುಂದಾಗಿದೆ.

Related