ಆಸ್ತಿ ವಿಚಾರ: ರಕ್ತ ಸಂಬಂಧಿಯನ್ನೇ ಕೊಲೆ

ಆಸ್ತಿ ವಿಚಾರ: ರಕ್ತ ಸಂಬಂಧಿಯನ್ನೇ ಕೊಲೆ

ಯಾದಗಿರಿ : ಗೇಣು ಮಣ್ಣಿಗಾಗಿ ತನ್ನ ಸ್ವಂತ ರಕ್ತ ಸಂಬಂಧಿಯನ್ನೆ ಆಕ್ಸಿಡೆಂಡ್ ಮಾಡಿ ಕೊಲೆ ಮಾಡಿದ್ದಾರೆ.

ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದ ಸಗರಕಟ್ಟಿ ಹಳ್ಳದ ಹತ್ತಿರ ನಡೆದ ಹತ್ಯೆ! ರಂಗಯ್ಯ ಗುತ್ತೇದಾರ್ ಎಂಬ ವ್ಯಕ್ತಿ ಹಾಗಿ ಆತನ ಸಂಬಂಧದಿಕರಿಗೆ  ಕೆಲ  ವರ್ಷಗಳಿಂದ  ಆಸ್ತಿ  ವಿಚಾರವಾಗಿ  ಆಗಾಗ  ಗಲಾಟೆಗಳು  ಆಗಿತ್ತಿತ್ತು.  ಆದರೆ ಇದೀಗ ಆ ಜಗಳ ವಿಕೋಪಕ್ಕೆ ತಿರುಗಿ ರಂಗಯ್ಯ ಗುತ್ತೆದಾರ್ ಬೈಕ್ ಮೇಲೆ ಹೋಗುತ್ತಿರುವಾಗ ಆತನ ಸಂಬಧಿ ಶರಣಗೌಡ ಗುತ್ತೇದಾರ್ ಹಾಗೂ ಆತನ ಸಹಚರರು ಹಿಂಬದಿಯಿAದ ಬಂದು ಆತನಿಗೆ ಡಿಕ್ಕಿ ಹೊಡೆದು ಬರ್ಬರರವಾಗಿ ಮಚ್ಚಿನಿಂದ ಹೊಡೆದು ಹತ್ಯೆಗೈದಿದ್ದಾರೆ.

ಈ ವಿಚಾರವಾಗಿ ರಂಗಯ್ಯ ಗುತ್ತೇದಾರ್ ಕುಟುಂಬಸ್ಥರು ಹಲವು ಬಾರಿ ಕೆಂಬಾವಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಮನವಿ ಮಾಡಿದರು. ಪೊಲೀಸರು ಕ್ಯಾರೆ ಅಂದಿಲ್ಲ. ಅವತ್ತು ಪೊಲೀಸರು ನಮ್ಮ ಮನವಿಗೆ ಸ್ಪಂದಿಸಿದರೆ. ಇವತ್ತು ನಮ್ಮ ತಂದೆ ಸಾಯುತ್ತಿರಲಿಲ್ಲ. ಇದರಿಂದಾಗಿ ತನ್ನ ತಂದೆಯ ಸಾವಿಗೆ ನೇರವಾಗಿ ಕೆಂಬಾವಿ ಪೊಲೀಸರೆ ಕಾರಣ ಎಂದು ರಂಗಯ್ಯ ಗುತ್ತೇದಾರ್ ಮಗಳು ಆರೋಪಿಸಿದ್ದಾಳೆ.

ರಂಗಯ್ಯ ಗುತ್ತೇದಾರ್ ಕುಂಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದು ಜೀವ ಬಲಿ ಪಡೆದ ಆರೋಪಿ ಶರಣಗೌಡ ಹಾಗೂ ಆತನ ಸಹಚರ ಕೆಂಬಾವಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.

Related