ಪಿಕ್ ನಿಕ್ ಹೋದ ಬಾಲಕಿ ಸಾವು

ಪಿಕ್ ನಿಕ್ ಹೋದ ಬಾಲಕಿ ಸಾವು

ಬೀದರ್, ಫೆ. 21 : ಶಾಲೆಯಿಂದ ಪಿಕ್ನಿಕ್ ಹೋದಾಗ ಬಾಲಕಿ ಅನುಮಾನ್ಪಾದವಾಗಿ ಸಾವನ್ನಪ್ಪಿದ್ದು. ನಿಧಿಯ ಆಸೆಗಾಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಬಾದ್ ತಾಲೂಕಿನ ನಿರ್ಣಾ ಗ್ರಾಮದ ರಕ್ಷಿತಾ ಮೃತ ಬಾಲಕಿ. ಕಳೆದ ವರ್ಷ ನ. ತಿಂಗಳಲ್ಲಿ ಕಲಬುರಗಿ ತಾಲೂಕಿನ ಚಿಂಚೋಳ್ಳಿಗೆ ಪಿಕ್ ನಿಕ್ ಹೋದಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ರಕ್ಷಿತಾ ಅಪಘಾತವಾದ ಸ್ಥಿತಿಯಲ್ಲಿ ಅನುಮಾನ್ಪದವಾಗಿ ಸಾವನ್ನಪ್ಪಿದ್ದಳು. ಈ ಬಗ್ಗೆ ಚಿಟ್ಟಗುಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈಗ ಬಾಲಕಿಯ ಪೋಷಕರು ಇದು ಅಫಘಾತವಲ್ಲ ನಿಧಿಗಾಗಿ ಕೊಲೆ ಮಾಡಲಾಗಿದೆ ಎಂದು ವಿವೇಕಾನಂದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಗಂಭೀರ ಅರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ, ಶಿಕ್ಷಣ ಸಚಿವರಿಗೆ ಸೂಕ್ತ ತನಿಖೆಗೆ ಆಗ್ರಹಿ ಪತ್ರ ಬರೆದಿದ್ದಾರೆ.

Related