ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಜನ

ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಜನ

ಸೇಡಂ : ಕೆಲವು ದಿನಗಳ ಮಿರಾಮದ ಬಳಿಕ ಸೇಡಂ ತಾಲೂಕಿನಲ್ಲಿ ಎರಡು ದಿನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೊರೋನಾ ಸೊಂಕಿತರ ಸಂಖ್ಯೆ ಸೇಡಂ ನಲ್ಲಿ ಹೆಚ್ಚುತಾ ಹೊಗುತ್ತಿರುವುದು ಒಂದು ಕಡೆಯಾದರೆ ಇನೊಂದು ಕಡೆ ಮಳೆರಾಯನ ಆರ್ಭಟಕ್ಕೆ ಜನ ನಲುಗಿ ಹೋಗಿದ್ದಾರೆ.

ಪಟ್ಟಣದ ಮಿಸ್ಕಿನಪುರ ಸತ್ತರಿಯಾ ನಗರದಲ್ಲಿ ಮಳೆನೀರು ಮನೆಗಳಿಗೆ ನುಗ್ಗಿದ್ದು ಏರಿಯಾ ಸಂಪೂರ್ಣವಾಗಿ ಜಲವೃತವಾಗಿ ರಸ್ತೆ ಸಂಪರ್ಕಗಳು ಬಂದ್ ಆಗಿವೆ. ಪುರಸಭೆಯಿಂದ ಚರಂಡಿ ವ್ಯವಸ್ಥೆ ಮಾಡಲಾಗಿದೆ ಆದರೆ ರಸ್ತೆಯಕಿಂತ ಎರಡು ಅಡಿ ಎತ್ತರವಾಗಿ ಅವೈಜ್ಞಾನಿಕ ವಾಗಿ ಚರಂಡಿ ಮಾಡಿದು ನೀರು ಸಗರವಾಗಿ ಚರಂಡಿಗೆ ಹೋಗದೆ ರಸ್ತೆಯ ಮೇಲೆ ನಿಂತು ಜನರ ಒಡಾಟಕ್ಕೆ ತೊಂದರೆ ಯಾಗಿದೆ. ಮಳೆಯು ಹೀಗೆ ಮುಂದುವರೆದರೆ ಅನೇಕ ಮನೆಗಳಿಗೆ ನೀರು ನುಗ್ಗುವ ಸಾದ್ಯತೆ ಇದೆ.

Related