ಮಲ್ಲಪ್ಪ ದರ್ಶನ ಮತ್ತಷ್ಟು ಸುಲಬ

ಮಲ್ಲಪ್ಪ ದರ್ಶನ ಮತ್ತಷ್ಟು ಸುಲಬ

ಬೆಟ್ಟದಪುರ : ಸ್ಥಳಿಯ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ರೂ ೪ ಕೋಟಿ ವೆಚ್ಚದಿಂದ ನಿರ್ಮಿಸುವ   ರಸ್ತೆ, ಚರಂಡಿ, ಬೀದಿ ದೀಪಗಳ ಅಳವಡಿಕೆಗೆ,  ಶಾಸಕ ಕೆ. ಮಹದೇವ್ ಮಂಗಳವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು  ಕಾವೇರಿ ನದಿಯಿಂದ ಕುಡಿಯುವ ನೀರಿನ ಯೋಜನೆಗೆ ೨೫೦ ಕೋಟಿ ರೂ.  ನೀಡಲಾಗಿದೆ. ಎಂದು ತಿಳಿಸಿದರು.

ಅಭಿವೃದ್ಧಿಗಾಗಿ ಮನವಿ : ಬೆಟ್ಟದಪುರವನ್ನು ಪಟ್ಟಣ ಪಂಚಾಯತಿ ಮೆಲ್ದರ್ಜೆಗೆ, ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು, ಗ್ರಾಮದೇವತೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು  ತಾಲ್ಲೂಕು ರೈತ ಮುಖಂಡ ದೇವರಾಜು, ರಾಜಶೇಖರ್ ರವರು ಮನವಿ ಮಾಡಿದರು.

Related