ಕೆಂಡಸಂಪಿಗೆ ಚೆಲುವೆಗೆ ಕೂಡಿಬಂತು ಕಂಕಣ ಭಾಗ್ಯ

ಕೆಂಡಸಂಪಿಗೆ ಚೆಲುವೆಗೆ ಕೂಡಿಬಂತು ಕಂಕಣ ಭಾಗ್ಯ

ಬೆಂಗಳೂರು: ಮಾನ್ವಿತಾಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಮಾನ್ವಿತ ಕಾಮತ್ ಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದು ಸ್ವತಃ ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಕೆಂಡಸಂಪಿಗೆ ನಟಿ ಮತ್ತು ಟಗರು ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ನಟಿ ಮಾನ್ವಿತಾ ಕಾಮನ್ ಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.

ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಅವರನ್ನು ನಟಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು ಮುಂದಿನ ತಿಂಗಳು ಅಂದರೆ ಮೇ 01 ರಂದು ಮದುವೆ ನಡೆಯಲಿದೆ ಎಂಬ ಸುದ್ದಿ ಹೊರ ಬಿದ್ದಿದೆ.

ಇನ್ನು ಏಪ್ರಿಲ್ 30 ರಂದು ಅರಶಿನ ಶಾಸ್ತ್ರ ಇರಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಮಾನ್ವಿತಾ ಅವರು ಟಗರು ಪುಟ್ಟಿ ಎಂದೇ ಫೇಮಸ್‌ ಆಗಿದ್ದಾರೆ. ಕೆಲ ತಿಂಗಳ ಹಿಂದೆ ಮಾನ್ವಿತಾ ಅವರಿಗೆ ಮಾತೃ ವಿಯೋಗ ಆಗಿತ್ತು. ಆದರೆ ತೀರಿಕೊಳ್ಳುವ ಮೊದಲೇ ಅಮ್ಮ ಮಗಳ ಮದ್ವೆಗಾಗಿ ಜಾತಕವನ್ನು ಆತ್ಮೀಯರಲ್ಲಿ ಹಂಚಿಕೊಂಡಿದ್ದರು. ಅದೀಗ ಮಾನ್ವಿತಾಗೆ ಮದುವೆ ನಿಶ್ಚಯವಾಗುವಂತೆ ಮಾಡಿದೆ.

ಆರ್‌ಜೆ ಆಗಿದ್ದ ಮಾನ್ವಿತಾ ಸ್ಯಾಂಡಲ್‌ವುಡ್‌ನಲ್ಲಿ ‘ಕೆಂಡಸಂಪಿಗೆ, ಕನಕ, ಟಗರು, ರಿಲ್ಯಾಕ್ಸ್ ಸತ್ಯ, ಶಿವ 143 ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಟಗರು ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು.

Related