ಸೌಲಭ್ಯವಿದ್ದರೆ ಕ್ರೀಡಾಪಟುವಾಗಲು ಸಾಧ್ಯ

  • In State
  • September 1, 2021
  • 565 Views
ಸೌಲಭ್ಯವಿದ್ದರೆ ಕ್ರೀಡಾಪಟುವಾಗಲು ಸಾಧ್ಯ

ಕಮಲನಗರ : ಗುರಮಠಕಲ್ ಕ್ರೀಡಾಂಗಣದಲ್ಲಿ ಇಂಜೀನಿಯರಿಂಗ್ ವಿಭಾಗದಿಂದ ಆಯೋಜಿಸಲಾದ ಈ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆ ಅಡಿಯಲಿ ಮಾತನಾಡಿದ್ದ ಅಧ್ಯಕ್ಷ ಪಾಪಣ್ಣ ಮನ್ನೆ ಆಟಗಾರರಿಗೆ ಉತ್ತಮ ಸಹಾಯ ಸೌಲಭ್ಯ ನೀಡಿದಾಗ ಕ್ರೀಡಾಪಟುವಾಗಿ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾಗಲಿರುವ ಕ್ರೀಡಾಂಗಣ ಕಾಮಗಾರಿಯಲ್ಲಿ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ದೃಷ್ಠಿಯಲ್ಲಿ, ಈ ಭಾಗದಲ್ಲೂ ಉತ್ತಮ ಆಟಗಾರರಿದ್ದು, ಅವರಿಗೆ ಸೂಕ್ತ ವೇದಿಕೆಯಿಲ್ಲದೆ ಕ್ರೀಡಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗಡಿ ನಾಡಿನ ಗ್ರಾಮೀಣ ಕ್ರೀಡಾಪಟುಗಳ ಅನುಕೂಲಕ್ಕಾಗಿ ಬಹುದಿನಗಳ ಬೇಡಿಕೆಯನ್ನು ಶಾಸಕರ ಮಾರ್ಗದರ್ಶನ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕ್ರಿಕೆಟ್ ಸೇರಿದಂತೆ ಹಲವಾರು ಆಟಗಳ ಜೊತೆಗೆ ಉಳಿದ ಕಾರ್ಯಗಳಿಗೆ ಈ ಕ್ರೀಡಾಂಗಣವನ್ನೇ ಅವಲಂಭಿಸಿದ್ದು, ಮಾದರಿ ಕ್ರೀಡಾಂಗಣ ನಿರ್ಮಿಸುವುದಾಗಿ ಹೇಳಿದರು.

Related