ಗ್ರಾಮದ ಜನಸೇವಾ ಆಶ್ರಮ ಕೇಂದ್ರ ಉದ್ಘಾಟನೆ

ಗ್ರಾಮದ ಜನಸೇವಾ ಆಶ್ರಮ ಕೇಂದ್ರ ಉದ್ಘಾಟನೆ

ಕಮಲನಗರ: ತಾಲ್ಲೂಕಿನ ಭವಾನಿ ಗ್ರಾಮದಲ್ಲಿ ಭಾನುವಾರ ಸಾಮಾಜಿಕ ಹೋರಾಟಗಾರ ಜನಸೇವಾ ಆಶ್ರಮ ಕೇಂದ್ರವನ್ನು ಗುರುನಾಥ ವಡ್ಡೆ ಉದ್ಘಾಟಿಸಿದರು.
ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಮಾಜಿಕ ಕಾರ್ಯ ಮಾಡಿ, ಗ್ರಾಮದಲ್ಲಿ ಜನಸೇವಾ ಆಶ್ರಮವನ್ನು ಕೇಂದ್ರ ಆರಂಭಿಸಿ, ಪ್ರತಿಯೊಬ್ಬ ಯುವಕರಲ್ಲಿ  ರಾಷ್ಟ್ರೀಯತೆ, ಅಖಂಡತೆ, ದೇಶ ಸೇವೆ, ಸಮಾಜ ಸೇವೆ ಕೈಗೊಳ್ಳಲು ಈ ಕೇಂದ್ರ ಪ್ರೇರಣೆ ಆಗಲಿದೆ ಎಂದು ಹೇಳಿದರು.
ಯಾವುದೇ ಸಂಸ್ಥೆ ಅಭಿವೃದ್ಧಿ ಪಡೆಸಬೇಕಾದರೆ ಜನರ ಸಹಕಾರ ಅಗತ್ಯ ಗ್ರಾಮದ ಹಿರಿಯ, ಮುಖಂಡರು ಮತ್ತು ಸಮಾಜ ಸೇವಕರು ಸೇರಿ ಗ್ರಾಮದ ಹೊರವಲಯದಲ್ಲಿ ೧ ಎಕರೆ ಜನಸೇವಾ ಆಶ್ರಮ ಕೇಂದ್ರ ಸ್ಥಾಪಿಸಲು ಭೂಮಿ ನೀಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ಬೆಳಕುಣಿ ಗ್ರಾ.ಪಂ ಮಾಜಿ ಅಧ್ಯಕ್ಷ ವೆಕಂಟರಾವ ಡೋಂಬಾಳೆ, ಸಂಗ್ರಾಮ ರಡ್ಡಿ, ಮಾಧವರಾವ ನರವಟೆ, ಉದ್ಧವ ದೇವಕತ್ತೆ, ಪ್ರಮೇಶ್ವರ ಸೂರ್ಯವಂಶಿ, ಸುಗ್ರೀವ ಸೂರ್ಯವಂಶಿ, ಅವರವಿಂದ ದೆವಕತ್ತೆ, ರಾಜೀವ ಡೋಂಬಾಳೆ, ಸುರೇಶ ಪಾಟೀಲ್, ಮಾಧವರಾವ ಡೋಂಬಾಳೆ, ದಿಗಂಬರ ಡೋಂಬಾಳೆ, ಭರತ ದೆವಕತ್ತೆ, ಗಂಗಾರಾಮ ದೆವಕತ್ತೆ, ನಿಲಕಂಠ ಪಾಟೀಲ್, ಪ್ರಕಾಶ ಸಲಗರ, ಬಂಡೆಪ್ಪ ಸ್ವಾಮಿ, ಬಾಬುರಾವ ದೇಶಮುಖ ಸೇರಿದಂತೆ ಗ್ರಾಮದ ನಾಗರಿಕರು ಇನ್ನಿತರರಿದ್ದರು.

Related