ಬೆಂಬಲಿಗರಿಂದ ಸಲಗರಗೆ ಅದ್ಧೂರಿ ಸ್ವಾಗತ

ಬೆಂಬಲಿಗರಿಂದ ಸಲಗರಗೆ ಅದ್ಧೂರಿ ಸ್ವಾಗತ

ಬಸವಕಲ್ಯಾಣ : ಶರಣರ ನಾಡು ಬಸವಕಲ್ಯಾಣದ ಮತಕ್ಷೇತ್ರದ ಮೋರಖಂಡಿ ಗ್ರಾಮದಲ್ಲಿ ಮಿಂಚಿನ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು, ಗ್ರಾಮದೊಳಗೆ ಶರಣು ಸಲಗರ ಅವರು ಬರುತ್ತಿದಂತೆ ಗ್ರಾಮದ ಮತದಾರರು ಬೆಂಬಲಿಗರು ಗ್ರಾಮಸ್ಥರು ಎಲ್ಲರು ಕೂಡಿ ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಮಾಡುವ ಮುಖಾಂತರ ಗ್ರಾಮದೋಳಗೆ ಬಿಜೆಪಿ ಅಭ್ಯರ್ಥಿಯಾದ ಸಲಗರ್ ಅವರಿಗೆ ಬರ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಸಲಗರ್ ಕ್ಷೇತ್ರದ ಜನತೆಯ ಆಶಿರ್ವಾದದಿಂದ ಇವತ್ತು ಬಿಜೆಪಿ ಪಕ್ಷದ ವರಿಷ್ಠರು ನನಗೆ ಬಿಜೆಪಿ ಟಿಕೇಟ್ ನಿಡಿದಾರೆ.

ಶರಣರ ನಾಡು ಬಸವಕಲ್ಯಾಣದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಅಶ್ವಾಸನ ಕೊಟ್ಟು ರಾಜಕೀಯ ಮಾಡೋಕೆ ನಾನು ಬಂದಿಲ್ಲ. ಅಣ್ಣ ಬಸವಣ್ಣ ಕರ್ಮ ಭೂಮಿಯಲ್ಲಿ ನನಗೆ ಸೇವೆ ಮಾಡುವ ಸಿಕ್ಕಿರುವ ಅವಕಾಶ ಇದು ನನ್ನ ಭಾಗ್ಯ ಎಂದು ಹೇಳಿದರು.

ಈ ವೇಳೆ ಮೋರಖಂಡಿ ಗ್ರಾಮದ ಹಿರಿಯ ಮುಖಂಡ ಬಸವರಾಜ್ ಪಾಟೀಲ್ ಶರಣು ಸಲಗರ ಅವರಿಗೆ 5000 ರೂ. ದೇಣಿಗೆ ನೀಡಿ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಮುಖಂಡ ಬಸವರಾಜ ಪಾಟೀಲ್, ಬಸವರಾಜ ಉಸ್ತರಿ, ವಿಠ್ಠಲ್ ಮೂಳೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಇನ್ನಿತರರಿದ್ದರು.

Related