ಉದಾಸಿಯವರ ಕಂಚಿನ ಪುತ್ಥಳಿಗೆ ಭರವಸೆ

  • In State
  • August 7, 2021
  • 415 Views
ಉದಾಸಿಯವರ ಕಂಚಿನ ಪುತ್ಥಳಿಗೆ ಭರವಸೆ

ಹಾನಗಲ್ : ಹಾವೇರಿ ಜಿಲ್ಲೆ ಅಸ್ತಿತ್ವಕ್ಕೆ ಹಾಗೂ ಅಭಿವೃದ್ಧಿಗೆ ಹೋರಾಡಿದ ರಾಜಕೀಯ ಮುತ್ಸದ್ಧಿ ಮಾಜಿ ಸಚಿವ ದಿ.ಸಿ.ಎಂ.ಉದಾಸಿಯವರ ಕಂಚಿನ ಪುತ್ಥಳಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಆಡಳಿತ ಭವನದ ಎದುರು ಸ್ಥಾಪಿಸಲು ಶುಕ್ರವಾರ ಸರ್ಕಾರ ಸ್ಪಂದಿಸಿದೆ. ಮಾಜಿ ಜಿ.ಪಂ. ಸದಸ್ಯ ಬಸವರಾಜ ಹಾದಿಮನಿ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿರುವುದು ಸಮಾಧಾನ ತಂದಿದೆ.
“ಹಾವೇರಿ ಜಿಲ್ಲಾಡಳಿತ ಭವನದ ಎದುರು ಈಗಾಗಲೇ ನಿರ್ಮಿಸಿರುವ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಾಟೇಲ್‌ರ ಪ್ರತಿಮೆ ಬಳಿಯೇ ಮಾಜಿ ಸಚಿವ ಸಿ.ಎಂ.ಉದಾಸಿಯವರ ಕಂಚಿನ ಪುತ್ಥಳಿ ನಿರ್ಮಿಸುವ ಮೂಲಕ ರಾಜಕೀಯ ಹೋರಾಟಕ್ಕೆ ಗೌರವ ಸಲ್ಲಬೇಕು. ಇದು ನಾಳಿನ ಯುವ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು” ಎಂದು ವಿನಂತಿಸಿದ್ದಾರೆ.

Related