ದೇವದುರ್ಗ : ತಾಲೂಕು ತಹಶೀಲ್ದಾರ ಕಚೇರಿಯಲ್ಲಿ ಸಂಭವಿಸಿದ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹತ್ತಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಿ.ಎ.ಜಿ ಮತ್ತು ಎಲ್.ಎನ್.ಡಿ ಹಾಗೂ ಪಿ.ಜಿ.ಸಿ ಮತ್ತು ಜಾತಿ ಆದಾಯ ತಿದ್ದುಪಡಿ ಇತರೆ ಶಾಖೆಗಳಿಗೆ ಬಳಸುವ ಗಣಕೀಕೃತ ಯಂತ್ರಗಳು ವಿದ್ಯುತ್ ವೈರಿಂಗ್ ಮತ್ತು ಕೋಣೆ ಸಂಪೂರ್ಣ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಯ ಅಪಘಾತಕ್ಕೆ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.
ದೇವದುರ್ಗದ ತಹಶೀಲ್ದಾರ ಸಂತೋಷಿ ರಾಣಿ ಇವರು ಒಟ್ಟು ಮೊತ್ತ 9.26.500ರೂ ನಷ್ಟವಾಗಿದೆ ಎಂದು ತಿಳಿಸಿದರು. ಇನ್ನು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.