ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇದೆ: ಯಶ್​

ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇದೆ: ಯಶ್​

ಬೆಂಗಳೂರು: ಮತದಾನ ಮಾಡುವುದು ನಮ್ಮ ಕರ್ತವ್ಯ ಹಾಗಾಗಿ ಎಲ್ಲರೂ ನಾವು ಮತ ಚಲಾಯಿಸಲೇಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,

ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇದೆ. ಕೆಲವು ಜನ ಮಾತ್ರ ಮತ ಚಲಾಯಿಸಿದ್ದಾರೆ ಅವರ ಅಭಿಪ್ರಾಯ ಏನಿರುತ್ತದೆ ಎಂದು ನಮಗೆ ಗೊತ್ತಾಗೋದಿಲ್ಲ. ಹಾಗಾಗಿ ಎಲ್ಲರೂ ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸುವುದು ನಮ್ಮ ಹಕ್ಕು ಎಂದು ಹೇಳಿದರು.

ಎಲ್ಲರೂ ಓಟ್​ ಮಾಡಲೇಬೇಕು. ಅದು ನಮ್ಮ ಕರ್ತವ್ಯ ಮತ್ತು ಹಕ್ಕು. ಮತದಾನಕ್ಕೆ ಅವಕಾಶ ಸಿಕ್ಕ ನಂತರ ನಿಮ್ಮ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಕು. ಎಲ್ಲವನ್ನೂ ಗಮನಿಸಿ ಕಲಿಯಬೇಕು. ಓಟಿಂಗ್​ ಜಾಸ್ತಿ ಆದರೆ ಜಾಗೃತಿ ಜಾಸ್ತಿ ಆಗಿದೆ ಅಂತ ಅರ್ಥ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು. ಕೆಲವೊಮ್ಮೆ ಸ್ವಲ್ಪ ಜನರು ಮಾತ್ರ ಮತದಾನ ಮಾಡಿರುತ್ತಾರೆ. ಮಿಕ್ಕಿದವರ ಅಭಿಪ್ರಾಯ ಏನಿರುತ್ತೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಸಂಜೆ ವೇಳೆಗೆ ಎಷ್ಟು ಮತದಾನ ಆಗುತ್ತೆ ಎಂಬುದು ನೋಡಬೇಕು ಎಂದರು.

 

Related