ಶಿಕ್ಷಣ ಕ್ಷೇತ್ರದಲ್ಲೊಂದು ಹೊಸ ಮನ್ವಂತರ

ಶಿಕ್ಷಣ ಕ್ಷೇತ್ರದಲ್ಲೊಂದು ಹೊಸ ಮನ್ವಂತರ

ಹರಪನಹಳ್ಳಿ: ತಾಲೂಕಿನಲ್ಲಿ ನೂತನವಾಗಿ ಏಕಲವ್ಯ ಸಂಘರ್ಷ ಸಮಿತಿ (ಇ.ಎಸ್.ಎಸ್)ಉದಯವಾಗುವ ಮೂಲಕ ವಾಲ್ಮೀಕಿ ನಾಯಕ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲೊಂದು ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚಂಗೆಪ್ಪ ಅಭಿಪ್ರಾಯ ಪಟ್ಟರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ನೂತನವಾಗಿ ಉದಯವಾಗಿರುವ ಏಕಲವ್ಯ ಸಂಘರ್ಷ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲಿ ್ಲಎರಡನೇ ಅತಿದೊಡ್ಡ ಸಮಾಜವಾಗಿದ್ದರೂ ಸಹ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಅನೇಕ ಪ್ರತಿಭಾವಂತ ಬಡವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಅಂತಹ ಬಡ ವಿದ್ಯಾರ್ಥಿಗಳಿಗೆ ನೀವೆಲ್ಲರೂ ಒಟ್ಟಾಗಿ ಈ ಸಂಘದ ಮೂಲಕ ಶಿಕ್ಷಣ ಕೊಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಕಾರ್ಯಕ್ಕೆ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಬೆಂಬಲ ಸದಾ ಇರುತ್ತದೆ ಎಂದರು.

ಈ ವೇಳೆ ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ಒಡ್ಡಿನ ದಾದಾಪುರದ ಶಿವಾನಂದ್, ಚಿಗಟೇರಿ ಹೋಬಳಿಯ ಸಂಘಟನಾ ಕಾರ್ಯದರ್ಶಿ ಜಿ.ಕೆ.ಬಸವರಾಜ್, ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ಹಾಗೂ ಗ್ರಾ.ಪಂ.ಸದಸ್ಯ ಬಾಲೇನಹಳ್ಳಿ ಜಿ.ಕೆಂಚನಗೌಡ, ತಾಲೂಕು ಎಸ್ಟಿ ಮೋರ್ಚಾದ ಅಧ್ಯಕ್ಷ ವಕೀಲ ಮನೋಜ್ ನೀಲಗುಂದ, ಕೋಟೆ ಹಿತರಕ್ಷಣೆ ಸಮಿತಿ ಅಧ್ಯಕ್ಷ ಪಟ್ನಾಮದ ವೆಂಕಟೇಶ್, ನೀಲಗುಂದ ಹೋಬಳಿಯ ಸಂಘಟನಾ ಕಾರ್ಯದರ್ಶಿ ಮಾಳ್ಗಿ ತಿಮ್ಮೇಶ್ ಮುಖಂಡರಾದ ಅಲಮರಸೀಕೆರಿ ಗೋಣೆಪ್ಪ, ನಂದಿಬೇವೂರುರಾಜಪ್ಪ, ಮಾರುತಿ ಮೈದೂರು ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಏಕಲವ್ಯ ಸಂಘರ್ಷ ಸಮಿತಿಗೆ ಪಟ್ಟಣದರಾಯದುರ್ಗದ ಪ್ರಕಾಶ್‍ಆಯ್ಕೆಯಾಗಿದ್ದು ಉಪಾಧ್ಯಕ್ಷರುಗಳಾಗಿ ಮೈದೂರಿನ ಪರಶುರಾಮ್, ಅಲಮರಸೀಕೆರೆಯ ಟಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ರಂಗಾಪುರಕ್ಯಾಂಪ್‍ನತಳವಾರ ಶಿವರಾಜ, ಖಜಾಂಚಿಯಾಗಿಜಿ.ದಾದಾಪುರದ ಹರೀಶ, ಸಂಘಟನಾ ಕಾರ್ಯದರ್ಶಿಗಳಾಗಿ ನೀಲಗುಂದದ ವೆಂಕಟೇಶ್, ಅರಸೀಕೆರೆ ಪ್ರದೀಪ್, ತಲುವಾಗಲು ಟಿ.ಮಂಜುನಾಥ್, ಹಲುವಾಗಲು ಎಸ್.ಬಿ.ಗಣೇಶ್, ಹರಪನಹಳ್ಳಿಯ ಜಿ.ವಿಜಯ್‍ಕುಮಾರ್, ಸಹ ಕಾರ್ಯದರ್ಶಿಗಳಾಗಿ ಕಣಿವಿಹಳ್ಳಿ ಎ.ಟಿ.ಶಿವರಾಜ, ನಿಚ್ಚವ್ವನಹಳ್ಳಿ ಕಾಳಜ್ಜ, ಮತ್ತಿಹಳ್ಳಿ ಗಿರೀಶಆಯ್ಕೆಯಾಗಿದ್ದಾರೆ.

Related