ಅಬಕಾರಿ ಪೊಲೀಸರ ಮೇಲೆಯೇ ಕುಡುಕರ ದಾಳಿ!

ಅಬಕಾರಿ ಪೊಲೀಸರ ಮೇಲೆಯೇ ಕುಡುಕರ ದಾಳಿ!

ಬೀದರ್ : ಬೀದರ್‌ನ ಪ್ರತಾಪ್ ನಗರದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಹೋದ ಅಬಕಾರಿ ಪೊಲೀಸರ ಮೇಲೆಯೇ ಕುಡುಕರು ದಾಳಿ ಮಾಡಿರುವ ಘಟನೆ ನಡೆದಿದೆ.

ಅಬಕಾರಿ ಪೊಲೀಸರ ಲಾಠಿಯಿಂದಲ್ಲೇ ಪೊಲೀಸರ ಮೇಲ್ಲೆ ಹಲ್ಲೆ ನಡೆದಿದ್ದಲ್ಲದೆ. ಸರ್ಕಾರಿ ವಾಹನವನ್ನು ಜಖಂಗೊಳಿಸಿದ್ದಾರೆ.

ಕೆಲ ಕಿಡಿಗೇಡಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ ಮಹಿಳಾ ಅಧಿಕಾರಿ ಸ್ಥಳಕ್ಕೆ ಹೋದಾಗ ಘಟನೆ ನಡೆದಿದೆ.
ಕುಡಿದ ನಶೆಯಲ್ಲಿದ್ದ ಇಬ್ಬರು ಪೊಲೀಸರ ಕೈಯಲ್ಲಿದ್ದ ಲಾಟಿ ತೆಗೆದುಕೊಂಡು ಸಿಬ್ಬಂದಿಗೆ ಧಳಿಸಿದ್ದಾರೆ. ಸರ್ಕಾರಿ ಕಾರಿನ ಮೇಲೆ ಕಲ್ಲು ಎತ್ತಿ ಹಾಕುವ ಮೂಲಕ ಜಖಂ ಗೊಳಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಅಬಕಾರಿ ಇಲಾಖೆಯ ಡಿವೈಎಸ್ಪಿ ಆನಂದ ಸೇರಿದಂತೆ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೋಗಿದರಿಂದ ದೊಡ್ಡ ದುರಂತ ತಪ್ಪಿದೆ.

Related