ಸೂರ್ಯಕಾಂತ್‍ಗೆ ಧನ ಸಹಾಯ

ಸೂರ್ಯಕಾಂತ್‍ಗೆ ಧನ ಸಹಾಯ

ಚಿಂಚೋಳಿ: ತಾಲೂಕಿನ ಗಡಿನಿಂಗದಳ್ಳಿ ಗ್ರಾಮದ ಸೂರ್ಯಕಾಂತ ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ಆಯ್ಕೆಯಾಗಿ ಗ್ರಾಮಕ್ಕೆ ಬಂದಿದ್ದು ಮಾಜಿ ತಾ.ಪಂ ಸದಸ್ಯ ಪ್ರೇಮಸಿಂಗ್ ಜಾಧವ್ ಸೂರ್ಯಕಾಂತ್ ರವರಿಗೆ 11 ಸಾವಿರ ರೂ. ಧನ ಸಹಾಯ ಮಾಡಿದರು .
ಈ ವೇಳೆ ಮಾತನಾಡಿದ ಪ್ರೇಮ್ ಸಿಂಗ್ ಜಾಧವ್ ಕಡುಬಡತನ ದಲ್ಲಿದ್ದ ಸೂರ್ಯಕಾಂತ್ ಆರ್ಥಿಕ ಪರಿಸ್ಥಿತಿಯ ಬಗ್ಗೆ ತಿಳಿದು ಸೂರ್ಯಕಾಂತನ್ನು ಭೇಟಿಯಾಗಿ ಧನಸಹಾಯ ಮಾಡಿದ್ದೇನೆ. ನನ್ನಿಂದ ಏನು ಸಾಧ್ಯವೋ ಸಹಾಯ ಮಾಡುತ್ತೇನೆ. ಇವರ ಮನೆಯ ಸ್ಥಿತಿ ಕೂಡ ನಾನು ನೋಡಿದ್ದೇನೆ ಇದರ ಬಗ್ಗೆ ಶಾಸಕರಲ್ಲಿ ಕೂಡ ಚರ್ಚಿಸಿದ್ದೇನೆ. ಮನೆ ವ್ಯವಸ್ಥೆ ಮಾಡಿಕೊಡುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಗೌರಿಶಂಕರ ಉಪ್ಪಿನ್ ರಮೇಶ ಪಟ್ಟಣಶೆಟ್ಟಿ ಸಂಗಮೇಶ, ಪಾಟೀಲ್ ತೀರ್ಥ ಪ್ರಸಾದ್ ಇನ್ನಿತರರಿದ್ದರು.

Related