ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲ

ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲ

ದೇವದುರ್ಗ : ತಾಲೂಕಿನ ಸವರ್ಣೀಯರಿಂದ ಹಲ್ಲೆಗೊಳಗಾದ ಚಿಕ್ಕಬೂದುರೂ ಮಾದಿಗ ಸಮುದಾಯದ ನೊಂದ ಕುಟುಂಬಸ್ಥರನ್ನು ಮಾದಿಗ ದಂಡೋರ ರಾಜ್ಯಾಧ್ಯಕ್ಷರಾದ ಬಿ ನರಸಪ್ಪ ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ದಲಿತರಿಗೆ ರಕ್ಷಣೆ ಇಲ್ಲ, ಮಾದಿಗ ಸಮಾಜದ ಮೇಲೆ ಹಲ್ಲೆ ದೌರ್ಜನ್ಯ ಗೂಂಡಾಗಿರಿ, ದಬ್ಬಾಳಿಕೆ, ಜಾತಿನಿಂದನೆ, ಅಸ್ಪೃಶ್ಯತೆ ಬಲವಾಗಿ ಬೆಳೆಯುತ್ತಿರುವುದಲ್ಲದೇ ನಮ್ಮ ಸಮಾಜಕ್ಕೆ ಮಾನವ ಸಮಾಜದಲ್ಲಿ ಸಮಾನತೆ ಸ್ವಾತಂತ್ರ‍್ಯವಿಲ್ಲದಂತಾಗಿದೆ. ನಮ್ಮ ಮಾದಿಗ ಸಮುದಾಯದ ಮೇಲೆ ದಿನಕ್ಕೊಂದು ಪ್ರಕರಣಗಳು ನಡೆಯುತ್ತಿದ್ದು, ತಕ್ಷಣ ರಾಜ್ಯ ಸರ್ಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ನಮ್ಮ ಸಂಘಟನೆಯ ರಾಜ್ಯ ಮಟ್ಟದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

Related