ನಿರಂತರ ಅಭಿವೃದ್ಧಿ ಕಾಮಗಾರಿ – ಉದಾಸಿ

ನಿರಂತರ ಅಭಿವೃದ್ಧಿ ಕಾಮಗಾರಿ – ಉದಾಸಿ

 ಹಾನಗಲ್ – ಪುರಸಭೆ ೨೦೧೯-೨೦ನೇ ಸಾಲಿನ ಯೋಜನೆಯಡಿ ೨ ಕೋಟಿ ರೂ ವಿಶೇಷ ಅನುದಾನದಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಶಿವಕುಮಾರ್ ಉದಾಸಿ ಚಾಲನೆ ನೀಡಿದರು. ಶುಕ್ರವಾರ ಪಟ್ಟಣದ ಕೆ. ಎಚ್.ಬಿ.ಕಾಲೋನಿ, ಗಂಗಾನಗರ, ಹೊಸಪೇಟೆಓಣಿ, ಮಕಬುಲಿಯಾನಗರ ಮತ್ತು ವಿವೇಕಾನಂದನಗರಗಳಲ್ಲಿ ಸಂಸದ ಶಿವಕುಮಾರ್ ಉದಾಸಿ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಉದಾಸಿ ಅವರು ಒಂದು ವರ್ಷ ಅವಧಿಯಲ್ಲಿ ತಾಲೂಕಿನಾದ್ಯಂತ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ಸಾಗುತ್ತಿದೆ ಹಾಗೂ ಪುರಸಭೆಗೂ ೨ ಕೋಟಿ ರು ವಿಶೇಷ ಅನುದಾನ ಲಭ್ಯವಾಗಿದೆ ಇದರಲ್ಲಿ ೭ ಪ್ಯಾಕೇಜ್‌ನಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ೧೩೨೦ವೀ. ಕಾಂಕ್ರೀಟ್ ಚರಂಡಿ ೧೬೪೮ಮೀ. ಸಿಮೆಂಟ್ ಕಾಂಕ್ರೀಟ್ ರಸ್ತೆ. ೬೮೦ಮೀ.ರಸ್ತೆ ಡಾಂಬರೀಕರಣ ಹಾಗೂ ೩ ಸಿ.ಡಿ.ನಿರ್ಮಾಣ ಕೈಗೊಳ್ಳಲಾಗುತ್ತಿದೆ ಹಾಗೂ ೧೫ನೇ ಹಣಕಾಸು ಯೋಜನೆಯಡಿ ೧.೪೦ಕೋಟಿ ಅನುದಾನ ಮಂಜೂರಾಗಿದ್ದು ಪಟ್ಟಣದ ಮೂಲಸೌಕರ್ಯ ಹಾಗೂ ಅಗತ್ಯತೆ ಬೇಡಿಕೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಶೋಭಾ ಉಗ್ರಣನವರ್, ಜಮೀರಅಹ್ಮದ ದರ್ಗಾ, ಸುನಕವ್ವಚಿಕ್ಕಣ್ಣನವರ, ಮಾಜಿ ಅಧ್ಯಕ್ಷ ಕಲ್ಯಾಣಕುಮಾರಶೆಟ್ಟರ, ಬಿಜೆಪಿ ತಾಲೂಕು ಅಧ್ಯಕ್ಷರಾಜುಗೌಳಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಲಿಂಗಪ್ಪ ತಲ್ಲೂರು, ಬಸವರಾಜ ಬೂದಿಹಾಳ.ಬಿ. ಎಸ್. ಅಕ್ಕಿವಳ್ಳಿ, ಸಂತೋಷ್ ಟಿಕೂಜಿ, ಸಿದ್ದಲಿಂಗಪ್ಪ ಶಂಕರಿಕೊಪ, ರಾಜೇಶ್ ಗುಡಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ.ಭಜಕ್ಕನವರ್, ಇಂಜಿನಿಯರ್ ನಾಗರಾಜ್ಮಿರ್ಜಿ ಮುಂತಾದ ಮುಖಂಡರು ಇದ್ದರು.

Related