ʼಕೈʼ ವಿರುದ್ಧ ಅಬ್ಬರಿಸಿದ ಬಿವೈವಿ

ʼಕೈʼ ವಿರುದ್ಧ ಅಬ್ಬರಿಸಿದ ಬಿವೈವಿ

ಹಾಸನ: ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ಜೊತೆ ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಪರ ಅಬ್ಬರದ ಪ್ರಚಾರವನ್ನು ಮಾಡಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ವೈ ವಿಜಯೇಂದ್ರ ಅವರು, ನಿನ್ನೆ ಕರ್ನಾಟಕ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ನಮ್ಮ ರಾಜ್ಯದ ಬಗ್ಗೆ ಎಷ್ಟು ಒಲವು, ಎಷ್ಟು ಪ್ರೀತಿ ಇದೆ ಎಂಬುದರ ಬಗ್ಗೆ ಅವರು ತೋರಿಸಿಕೊಟ್ಟಿದ್ದಾರೆ. ಆರೋ ದೀಪ ಜೋರಾಗಿ ಉರೀತದೆ ಎನ್ನುತ್ತಾರೆ, ಅದೇ ಪರಿಸ್ಥಿತಿ ಇಂದು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಂದಿದೆ. ಇಡೀ ದೇಶದಲ್ಲಿ 60 ವರ್ಷ ಆಡಳಿತ‌ ನಡೆಸಿದೆ, ಗರೀಬಿ ಹಟಾವೋ ಕರೆ ನೀಡಿದ್ರು ಅದು ಸಾಧ್ಯವಾಯ್ತಾ? ಕೇವಲ ಬಡವರ ನಿರ್ಮೂಲನೆ‌ ಆಯ್ತು ಅಷ್ಟೇ. ಅದೆಲ್ಲಾ ಮುಗಿದು ಇಂದು ರಾಜ್ಯದಲ್ಲಿ ಗ್ಯಾರೆಂಟಿ ನಾಟಕ ನಡೀತಿದೆ ಎಂದು ವ್ಯಂಗ್ಯವಾಡಿದರು.

 

Related