ಬೊಮ್ಮಾಯಿ ವಿರುದ್ಧ ತನ್ವೀರ್ ಅಸಮಾಧಾನ

ಬೊಮ್ಮಾಯಿ ವಿರುದ್ಧ ತನ್ವೀರ್ ಅಸಮಾಧಾನ

ಬೆಂಗಳೂರು, ಮಾ.06 : ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರಿಗೆ ಜೀವ ಬೆದರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಖಾದರ್ ಅವರಿಗೆ ಈಗಾಗಲೇ ಭದ್ರತೆ ನೀಡಲಾಗಿದೆ. ಇನ್ನು ಹೆಚ್ಚಿನ ಭದ್ರತೆ ಬೇಕಾಗಿದ್ರೆ ನೀಡುತ್ತೇವೆ ಎಂದರು. ಎಲ್ಲಿಂದ ಬೆದರಿಕೆ ಬಂದಿದೆ ಎನ್ನುವ ಬಗ್ಗೆ ಅವರು ತಿಳಿಸಬೇಕು. ಯಾವ ಪೋನ್ ನಂಬರ್ಗಳಿಂದ ಬೆದರಿಕೆ ಬಂದಿದೆ ಎನ್ನುವುದನ್ನ ತಿಳಿಸಬೇಕು. ತನಿಖೆಗೆ ಅವರು ಸೂಕ್ತ ರೀತಿಯಲ್ಲಿ ಮಾಹಿತಿ ನೀಡಬೇಕು ಎಂದು ಖಾದರ್ ಅವರಿಗೆ ಕೇಳಿಕೊಂಡರು.
ಗೃಹ ಸಚಿವರಿಗೆ ಪತ್ರ ಬರೆದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ತನ್ವೀರ್ ಸೇಠ್ ಅವರು, ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಅನ್ನೋದು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಸೂಕ್ತವಾಗಿ ತನಿಖೆ ನಡೆಯುತ್ತಿಲ್ಲ, ಈ ಪ್ರಕರಣದವನ್ನ ಗಂಭೀರವಾಗಿ ಪರಿಗಣಿಸುತ್ತೇನೆ. ನನ್ನ ಮೇಲೆ ಹಲ್ಲೆ ಉದ್ದೇಶವನ್ನ ಪತ್ತೆ ಮಾಡಬೇಕು. ಪತ್ತೆ ಹಚ್ಚಿ ನನಗೆ ನ್ಯಾಯ ಒದಗಿಸಬೇಕೆಂದು ಗೃಹಮಂತ್ರಿ ಬಸವರಾಜ್ ಬೊಮ್ಮಯಿ ಅವರಿಗೆ ತನ್ವೀರ್ ಸೇಠ್ ಅವರು ಪತ್ರ ಬರೆದಿದ್ದಾರೆ.

Related