ಬೆಂಗಳೂರು: ಕೊರೊನಾದಿಂದ ಕಂಗೆಟ್ಟಿದ್ದ ಜನರಿಗೆ ಗುರುವಾರ ರಾತ್ರಿಯಿಡೀ ಸುರಿದ ಮಳೆ ಕೊಂಚ ತಂಪೆರೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ #BangaloreRains ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದ್ದು, ಸಾಕಷ್ಟು ಮಂದಿ ಮಳೆಯ ಖುಷಿಯನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.
ಬಸವನಗುಡಿ, ಬಾಣಸವಾಡಿ, ಮಹದೇವಪುರ, ಮಾರತ್ತಹಳ್ಳಿ, ರಾಜಾಜಿನಗರ, ಬನಶಂಕರಿ, ವಿದ್ಯಾರಣ್ಯಪುರ ಹೀಗೆ ನಗರದ ಹಲವೆಡೆ ಮಳೆರಾಯನ ಸಿಂಚನವಾಗಿದೆ. ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಶುರುವಾದ ಮಳೆ ಶುಕ್ರವಾರ ಬೆಳಗ್ಗೆಯವರೆಗೂ ಎಡೆಬಿಡದೆ ಸುರಿಯಿತು.
ಒಟ್ಟಿನಲ್ಲಿ ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಯಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.