ಎಚ್ಚರಿಕೆ ವಹಿಸಲು ಜಾಗೃತಿ ಅಭಿಯಾನ

ಎಚ್ಚರಿಕೆ ವಹಿಸಲು ಜಾಗೃತಿ ಅಭಿಯಾನ

ಗುಬ್ಬಿ: ತಾಲೂಕಿನಲ್ಲಿ ಕೊರೋನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ಹಾಗೂ ಆರಿವನ್ನು ಮೂಡಿಸುತ್ತಿದ್ದರೂ ಸಾರ್ವಜನಿಕರು ಕೊರೋನಾ ನಿಯಮಗಳನ್ನು ಸರಿಯಾಗಿ ಪಾಲಿಸದೆ ಮಾಸ್ಕನ್ನು ಧರಿಸಲು ಹಿಂಜರಿಯುತ್ತಿರುವುದು ಕಂಡು ಬರುತ್ತಿತ್ತು.
ತುಮಕೂರು ಉಪವಿಭಾಗಾಧಿಕಾರಿಗಳಾದ ಅಜಯ್ ರವರು ಪಟ್ಟಣಕ್ಕೆ ಆಗಮಿಸಿ ಅವರೆ ಖುದ್ದಾಗಿ ರಸ್ತೆಗಳಲ್ಲಿ ಸಂಚಾರ ಮಾಡುತ್ತ ಸಾರ್ವಜನಿಕರಿಗೆ ಕೊರೋನಾದ ಬಗ್ಗೆ ಅರಿವನ್ನು ಮೂಡಿಸುವ ಜೊತೆಗೆ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ದಂಡ ವಿಧಿಸಿ ಎಚ್ಚರಿಕೆಯನ್ನು ನೀಡಿದರು. ನಂತರ ಮಾತನಾಡುತ್ತಾ ಕೊರೋನಾವನ್ನು ನಿಯಂತ್ರಿಸಿ ಹೋಗಲಾಡಿಸಲು ಎಲ್ಲ ಸಾರ್ವಜನಿಕರು ಸಹಕಾರ ನಿಡಬೇಕು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಆರೋಗ್ಯ ಮತ್ತು ಕಂದಾಯ ಹಾಗೂ ಪೊಲೀಸ್ ಇಲಾಖೆ ಗಳ ಜೊತೆ ಇತರ ಇಲಾಖೆ ಯವರು ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.

Related