ಸೋಲಿನ ಸುಳಿಯಿಂದ ಹೊರಬಾರದ ನಟ

ಸೋಲಿನ ಸುಳಿಯಿಂದ ಹೊರಬಾರದ ನಟ

ಬಾಲಿವುಡ್ ನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಬಹುಬೇಡಿಕೆ ನಟರಾಗಿದ್ದ ಅಮೀರ್ ಖಾನ್ ಅವರ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಮೀರ್ ಖಾನ್ ಅವರ ಸಿನಿಮಾಗಳು ಸೋಲನ್ನು ಅನುಭವಿಸುತ್ತಿರುವುದರಿಂದ ಬಾಲಿವುಡ್ ನಟ ಅಮೀರ್ ಖಾನ್ ಅವರು ಸದ್ಯಕ್ಕೆ ದೀರ್ಘಕಾಲ ಬ್ರೇಕ್​ ನ್ನು ತೆಗೆದುಕೊಂಡಿದ್ದಾರೆ.

ಹೌದು, ಖ್ಯಾತ ನಟ ಆಮಿರ್​ ಖಾನ್​ ಅವರು ಬಾಲಿವುಡ್​ನ ಬಹುಬೇಡಿಕೆಯ ಕಲಾವಿದ. ಒಂದು ಕಾಲದಲ್ಲಿ ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್​ ಮಾಡುತ್ತಿದ್ದವು. ಅವರ ನಟನೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಗಿದ್ದರೂ ಕೂಡ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಸಿಕ್ಕಿಲ್ಲ. ಇದರ ನಡುವೆ ಅವರು ಧ್ಯಾನದತ್ತ ಆಸಕ್ತಿ ತೋರಿಸಿದ್ದಾರೆ. ನೇಪಾಳಕ್ಕೆ ತೆರಳಿ ಆಮಿರ್​ ಖಾನ್​ ಅವರು ಧ್ಯಾನ  ಶಿಬಿರದಲ್ಲಿ ಭಾಗಿ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಆಮಿರ್​ ಖಾನ್​ ಅವರನ್ನು ಮಿಸ್ಟರ್​ ಪರ್ಫೆಕ್ಟ್​ ಎಂದು ಕರೆಯುತ್ತಾರೆ. ಹಾಗಿದ್ದರೂ ಕೂಡ ಕೆಲವೊಮ್ಮೆ ಅವರ ಲೆಕ್ಕಾಚಾರ ತಲೆ ಕೆಳಗಾಗುತ್ತದೆ. ಆಮಿರ್​ ಖಾನ್​ ನಟಿಸಿದ್ದ ‘ಥಗ್ಸ್​ ಆಫ್​ ಹಿಂದೂಸ್ತಾನ್’​ ಚಿತ್ರವನ್ನು ಜನರು ಇಷ್ಟಪಡಲಿಲ್ಲ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಕೂಡ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಮುಂದೇನು ಮಾಡಬೇಕು ಎಂಬ ಬಗ್ಗೆ ಆಮಿರ್​ ಖಾನ್​ ಅವರು ಇನ್ನೂ ತೀರ್ಮಾನ ತೆಗೆದುಕೊಂಡಂತಿಲ್ಲ.

ಸದ್ಯಕ್ಕೆ ಆಮಿರ್​ ಖಾನ್​ ಅವರು ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಬಾಲಿವುಡ್​ನ ಸಮಾರಂಭಗಳು, ಸ್ನೇಹಿತರ ಮನೆಯಲ್ಲಿನ ಪಾರ್ಟಿ ಇತ್ಯಾದಿ ಇವೆಂಟ್​ಗಳಲ್ಲಿ ಅವರು ಕಾಣಿಸಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ಅವರಿಗೆ ಧ್ಯಾನದ ಬಗ್ಗೆ ಆಸಕ್ತಿ ಮೂಡಿದೆ. ಹಾಗಾಗಿ ಮೇ 7ರ ಮುಂಜಾನೆ ಅವರು ನೇಪಾಳಕ್ಕೆ ತೆರಳಿದ್ದಾರೆ. ಅಲ್ಲಿ 10 ದಿನಗಳ ಕಾಲ ಅವರು ಧ್ಯಾನ ಶಿಬಿರದಲ್ಲಿ ಭಾಗಿ ಆಗಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಪ್ರತಿ ಬಾರಿ ಆಮಿರ್ ಖಾನ್​ ಅವರ ಸಿನಿಮಾ ರಿಲೀಸ್​ ಆಗುವಾಗಲೂ ಕೆಲವರು ಬಹಿಷ್ಕಾರಕ್ಕೆ ಮುಂದಾಗುತ್ತಾರೆ. ‘ಲಾಲ್​ ಸಿಂಗ್​ ಚಡ್ಡಾ’ ಬಿಡುಗಡೆ ಸಮಯದಲ್ಲೂ ಹಾಗೆಯೇ ಆಯಿತು. ಹಾಗಂತ ಈ ಚಿತ್ರದ ಬಿಡುಗಡೆಯನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಆದರೆ ಪ್ರೇಕ್ಷಕರಿಗೆ ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾ ಇಷ್ಟ ಆಗಲಿಲ್ಲ. ಅದಕ್ಕೆ ಕಾರಣ ಹಲವು. ಇದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ಆಗಿತ್ತು. ಮೂಲ ಸಿನಿಮಾವನ್ನು ಬಹುತೇಕರು ಅದಾಗಲೇ ನೋಡಿದ್ದರು. ‘ಲಾಲ್​ ಸಿಂಗ್ ಚಡ್ಡಾ’ ಚಿತ್ರದ ಅವಧಿ ಕೂಡ ದೀರ್ಘವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಸಿನಿಮಾ ಸೋಲಬೇಕಾಯಿತು.

Related