ಎಲ್ಲರಿಗೂ ಸಾಧನೆ ಮಾಡುವ ಆಸೆ ಇರುತ್ತೆ

ಎಲ್ಲರಿಗೂ ಸಾಧನೆ ಮಾಡುವ ಆಸೆ ಇರುತ್ತೆ

ಯಾದಗಿರಿ : ಸಚಿವರಾಗಬೇಕು ಎನ್ನುವ ಆಸೆ ಆಪೇಕ್ಷೆ ಎಲ್ಲರಿಗೂ ಇರುತ್ತದೆ. ನಮಗೂ ಬಿಟ್ಟಿಲ್ಲಿ ನಿಮಗೂ ಬಿಟ್ಟಿಲ್ಲ. ಎಲ್ಲರಿಗೂ ಮಂತ್ರಿಯಾಗಬೇಕು ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಇರುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಎಚ್. ವಿಶ್ವನಾಥ್ ಉದ್ದೇಶಿಸಿ ಹೇಳಿದರು.

ಜಿಲ್ಲೆಯ ಶಹಾಪುರದಲ್ಲಿ ಮಾತನಾಡಿ, ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವ ವಿಚಾರ ಆತುರದ ನಿರ್ಧಾರ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ವಿಶ್ವನಾಥ್ ಅವರಿಗೆ ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಅವರ ಪರವಾಗಿ ನಮ್ಮ ಪಕ್ಷ ಗಟ್ಟಿಯಾಗಿ ನಿಲ್ಲುತ್ತದೆ. ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ. ಅವರು ಯಾವುದೇ ಕಾರಣಕ್ಕೂ ವಿಚಲಿತರಾಗಬಾರದು. ಅವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂದರು.

ಆರ್ಥಿಕವಾಗಿ ಸಾಮಾಜಿಕವಾಗಿ ಸಹಾಯ ಮಾಡಲು ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲಾಗಿದೆ. ಅದು ಭಾಷೆ ಮೇಲೆ ಮಾಡಿರುವಂತ ಪ್ರಾಧಿಕಾರವಲ್ಲ. ತಪ್ಪಾಗಿ ಅರ್ಥೈಸಿಕೊಂಡು ಬಂದ್ ಮಾಡುವುದು ಬೇಡ ಎಂದು ಕನ್ನಡ ಪರ ಸಂಘಟನೆಗಳಿಗೆ ಡಿಸಿಎಂ ಸವದಿ ಮನವಿ ಮಾಡಿದರು.

Related