ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

ಬುದ್ಧಿವಾದ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

ಬನಹಟ್ಟಿ : ಬನಹಟ್ಟಿ ನಗರದಲ್ಲಿ ಬುದ್ಧಿ ಮಾತು ಹೇಳಿದ ತಂದೆ –ತಾಯಿಯ ಮಾತಿಗೆ ಸಿಟ್ಟಾದ ಮಗಳು ಆತ್ಮಹತ್ಯೆ ಮಾಡಿಕೊಂಡ  ಘಟನೆ ಬನಹಟ್ಟಿ ನಗರದಲ್ಲಿ ನಡೆದಿದೆ.

ಅಶೋಕ ಕಾಲೋನಿಯ ನಿವಾಸಿಯಾದ ಸೌಂದರ್ಯ ಸಂಜು ಗೋಲಬಾವಿ (೧೮) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸೌಂದರ್ಯ ಬನಹಟ್ಟಿಯಲ್ಲಿ ಪಿಯುಸಿ ಓದುತ್ತಿದ್ದು, ಸೋಮವಾರ ಮನೆಯಲ್ಲಿ ತಂದೆ, ತಾಯಿಯೊಂದಿಗೆ ಜಗಳವಾಗಿ ಅಭ್ಯಾಸ ಮಾಡದೆ ಊರಲ್ಲಿ ತಿರುಗಾಡುವುದು ಮಾಡುತ್ತೀದ್ದಿಯಾ ಎಂದು ಬುದ್ಧಿವಾದ ಹೇಳಿದರು.

ಇದರಿಂದ ಯುವತಿಯು ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಬಳೆಚೂರಿನ ಪುಡಿಯನ್ನು ನೀರಿನಲ್ಲಿ ಹಾಕಿಕೊಂಡು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಕುರಿತು ಬನಹಟ್ಟಿ ಪೋಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related