ಭೀಕರ ಅಪಘಾತ ಸ್ಥಳದಲ್ಲೆ 13 ಸಾವು

ಭೀಕರ ಅಪಘಾತ ಸ್ಥಳದಲ್ಲೆ 13 ಸಾವು

ಕುಣಿಗಲ್, ಮಾ. 06: ಬ್ರೀಝಾ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಎದುರು ಬರುತ್ತಿದ್ದ ಟವೇರಾ ಕಾರಿನ ಮೇಲೆ ಹಾರಿ ಬಿದ್ದು ನಡೆದ ಭೀಕರ ಅಪಘಾತದಲ್ಲಿ ಆರು ತಿಂಗಳ‌ ಹಸುಗೂಸು ಸೇರಿದಂತೆ 13 ಮಂದಿ ಸ್ಥಳದಲ್ಲೆ ಮೃತಪಟ್ಟಿರುವ ಧಾರುಣ ಘಟನೆ ಗುರುವಾರ ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ತಾಲೂಕಿನ ಬ್ಯಾಲದಕೆರೆ ಗೇಟ್ ಬಳಿ‌ ನಡೆದಿದೆ.

ಟವೇರಾ ಕಾರಿನಲ್ಲಿದ್ದ ತಮಿಳುನಾಡಿನ ಸೀಕನಪಲ್ಲಿ ಗ್ರಾಮದ ಮಂಜುನಾಥ್ (35) ತನುಜ (25) ಗೌರಮ್ಮ (60) ರತ್ನಮ್ಮ (52) ಸುಂದರ್ ರಾಜ್ (48) ರಾಜೇಂದ್ರ 27) ಸರಳ (32) ಪ್ರಶನ್ಯಾ (14) ಮಾಲಾಶ್ರೀ(4) ಅರುತಿಂಗಳ ಹಸುಗೂಸು ಬ್ರೀಝಾ ಕಾರಿನಲ್ಲಿದ್ದ ಬೆಂಗಳೂರಿನ ಕೆಂಗೇರಿಯ ಹುಣಸೆಮರದಪಾಳ್ಯದ ಲಕ್ಷ್ಮಿ ಕಾಂತ್ (24) ಗೇರುಪಾಳ್ಯದ ‌ ಸಂದೀಪ (36) ರಾಮೋಹಳ್ಳಿ ಮಧು (28) ಮೃತಪಟ್ಟವರು ಗಾಯಗೊಡ ಟವೇರಾ ಕಾರಿನಲ್ಲಿದ್ದ ಶ್ವೇತಾ (32) ಹರ್ಪಿತಾ (12) ಗಂಗೋತ್ರಿ (14) ಹಾಗೂ ಪ್ರಕಾಶ ಗಾಯೊಂಡಿದ್ದಾರೆ.

ಈ ಮೂರ ಮಂದಿಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಬೆಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಬ್ರೀಜಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಮೂಲಕ ಹಾರಿ ಟವೆರಾಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸದೆ.

ಟವರೇ ಕಾರಿನಲ್ಲಿದ್ದವರು ಧರ್ಮಸ್ಥಳದಿಂದ ಮಗುವಿನ ಮಂಡೆ ತೆಗಸಿಕೊಂಡ ವಾಪಾಸ್ ಬರುವಾಗ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬ್ರೀಝಾ ಕಾರು ಅಯತಪ್ಪಿ ಡಿವೈಡರ್ ಡಿಕ್ಕಿ ಹೊಡೆದು ಟವೇರಾ ಕಾರಿನ ಮೇಲೆ ಹಾರಿ ಬಿದ್ದಿದೆ.

ಬ್ರೀಝಾ ಕಾರಿನಲ್ಲಿ ಇದ್ದ ಯುವಕರು ಮಧ್ಯಪಾನ‌ ಮಾಡಿ ಕಾರನ್ನು ಅತಿ ವೇಗವಾಗಿ ಚಲಾಯಿಸಿರುವುದೇ ಭೀಕರ ಅಪಘಾತಕ್ಕೆ ಕಾರಣ ಎಂದು‌ ಪೋಲಿಸರು ತಿಳಿಸಿದ್ದಾರೆ.

Related